ಚಳ್ಳಕೆರೆ ಡಿ.23
ಜನಧ್ವನಿ ಡಿಜಿಟಲ್ ಮೀಡಿಯಾ ವರದಿ ಎಫೆಕ್ಟ್ ಅಭಿವೃದ್ಧಿ ಹೆಸರಿನಲ್ಲಿ ನೀರು ತುಂಬಿದ್ದ ಗೋಕಟ್ಟೆ ಕಿತ್ತು ನೀರು ಪೋಲು ಮಾಡಿದವರ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹ… ಎಂಬ ತಲೆಬರಹದಡಿ ಜನಧ್ವನಿ ಡಿಜಿಟಲ್ ಮೀಡಿಯಾ ಸುದ್ದಿ ಬಿತ್ತರಿಸಿದ ಬೆನ್ನಲ್ಲೇ ಸ್ಥಳಕ್ಕೆ ಅಧಿಕಾರಿಗಳು ದೌಡ್.





ಹೌದು ಇದು ಚಳ್ಳಕೆರೆ ತಾಲೂಕಿನ ದೇವರಮರಿಕುಂಟೆ ಗ್ರಾಮಪಂಚಾಯತ್ ವ್ಯಾಪ್ತಿಯ ವಡೇರಹಳ್ಳಿ ಹಾಗೂ ಬೊಂಬೆರಹಳ್ಳಿ ಮಧ್ಯೆ ಜನ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ನಿರ್ಮಿಸಿದ್ದ ಗೋಕಟ್ಟೆಯನ್ನು ನಾಶ ಮಾಡಿ ನೀರು ಪೋಲು ಮಾಡಿರುವ ಬಗ್ಗೆ ಸುದ್ದಿ ಬೆಳಕು ಚೆಲ್ಲಿದ ಬೆನ್ನಲ್ಲೇ ಗ್ರಾಮಪಂಯಿತಿ ಪಿಡಿಒ ಶಶಕಲಾ. ಗ್ರಾಮಲೆಕ್ಕಾಧಿಕಾರಿ ಶಿವಮೂರ್ತಿ ಹಾಗೂ ಗ್ರಾಪಂ ಸದಸ್ಯರೊಂದಿಗೆ ಗೋಕಟ್ಟೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಐಸಿಸಿಐ ಪೌಂಡೇಷನ್ ವತಿಯಿಂದ ಗೋಕಟ್ಟೆ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗಿದೆ ಮಾರ್ಚ್ ತಿಂಗಳ ಒಳಗೆ ಕಾಮಗಾರಿ ಮಾಡದಿದ್ದರೆ ಅನುದಾನ ವಾಪಾಸ್ ಹೋಗುತ್ತದೆ ಎಂದು ಎರಡು ಗ್ರಾಮಸ್ಥರ ಬಳಿ ಮಾಹಿತಿ ನೀಡಿದ್ದಾರೆ ಅದರೆ ಬೇಸಿಗೆಯಲ್ಲಿ ಮಾಡುವಂತೆ ಹೇಳಿದರೂ ಸಹ ಅನುದಾನ ವಾಪಸ್ ಹೋಗುತ್ತದೆ ಎಂದು ನೀರು ಖಾಲಿ ಮಾಡಿದರೆ ಕಾಮಗಾರಿ ಮಾಡಲು ಸುಲಭವಾಗುತ್ತದೆ ಎಂದು ಗೋಕಟ್ಟೆ ಹೊಡೆದು ನೀರು ಹೊರ ಬಿಟ್ಟಿದ್ದಾರೆ.
ಈಗ ಗೋಕಟ್ಟೆಯ ಅರ್ಧ ನೀರು ವೇದಾವತಿ ನದಿ ಪಾಲಾಗಿದೆ.
ಇತ್ತ ಸರಕಾರ ಕೋಟಿ ಕೋಟಿ ಅನುದಾನ ಖರ್ಚುಮಾಡಿ ಅಪ್ಪರ್ ಭದ್ರ ಯೋಜನೆಯಡಿ ಪೈಪ್ ಲೈನ್ ಮೂಲಕ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಹಣ ಖರ್ಚಾದರೂ ಕೆರೆಗಳಿಗೆ ನೀರು ಬಂದಿಲ್ಲ ಅಕಾಲಿಕ ಮಳೆಯಿಂದಾಗಿ ಗೋಕಟ್ಟೆಗೆ ಬಂದ ಮಳೆ ನೀರು ಅಭಿವೃದ್ಧಿ ಹೆಸರಿನಲ್ಲಿ ಐಸಿಐಸಿಐ ಪೌಂಡೇಷನ್ ಸಂಸ್ಥೆಯವರು ಗ್ರಾಮಪಂಚಾಯಿತಿ ಕಚೇರಿಗೂ ಮಾಹಿತಿ ನೀಡದೆ ಗೋಕಟ್ಟೆ ನೀರು ಖಾಲಿ ಮಾಡಿರುವುದು ಗ್ರಾಮಸ್ಥರ ಅಕ್ರೋಶಕ್ಕೆ ಗುರಿಯಾಗುವಂತೆ ಮಾಡಿದೆ.
About The Author
Discover more from JANADHWANI NEWS
Subscribe to get the latest posts sent to your email.