January 29, 2026
IMG-20241223-WA0244.jpg

“ಜಿಲ್ಲಾ ಹಂತದಲ್ಲಿ ನಡೆದ ಶ್ರೀ ಶಂಕರಾಚಾರ್ಯ ವಿರಚಿತ ಕಲ್ಯಾಣವೃಷ್ಟಿ ಅಭಿಯಾನ”. ಚಿತ್ರದುರ್ಗ:-ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಶೃಂಗೇರಿ ಜಗದ್ಗುರು ಶ್ರೀ ಭಾರತೀ ತೀರ್ಥ ಸ್ವಾಮೀಜಿ ಅವರ ಸಂನ್ಯಾಸ ಸ್ವೀಕಾರದ ಸ್ವರ್ಣ ಮಹೋತ್ಸವದ ಅಂಗವಾಗಿ ಶ್ರೀ ಶಂಕರಾಚಾರ್ಯ ವಿರಚಿತ “ಕಲ್ಯಾಣವೃಷ್ಟಿಸ್ತವ ಸ್ತೋತ್ರ”, ಶಿವಪಂಚಾಕ್ಷರ ನಕ್ಷತ್ರಮಾಲಾಸ್ತೋತ್ರ ಮತ್ತು ಲಕ್ಷ್ಮೀನೃಸಿಂಹ ಕರುಣಾರಸ ಸ್ತೋತ್ರಗಳು ಮತ್ತು ವಿವಿಧ ದೇವರ ಭಜನೆಗಳ ಪಾರಾಯಣ ಕಾರ್ಯಕ್ರಮವು ಶ್ರದ್ಧಾ ಭಕ್ತಿಪೂರ್ವಕವಾಗಿ ನಡೆಯಿತು.ಈ ಪಾರಾಯಣ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಬೆಲಗೂರಿನ ಶ್ರೀಕ್ಷೇತ್ರದ ಪೀಠಾಧಿಪತಿ ಶ್ರೀ ಮಾರುತಿ ಶರ್ಮ ಗುರುಗಳು ವಹಿಸಿದ್ದರು.ಈ ಪಾರಾಯಣ ಕಾರ್ಯಕ್ರಮದಲ್ಲಿ ಶೃಂಗೇರಿ ಶಾರದಾ ಪೀಠದ ಪ್ರತಿನಿಧಿ ಉಮೇಶ್ ಹರಿಹರ, ಚಿತ್ರದುರ್ಗದ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಪಿ.ಎಸ್.ಮಂಜುನಾಥ, ಕಲ್ಯಾಣವೃಷ್ಟಿ ಅಭಿಯಾನದ ಜಿಲ್ಲಾ ಸಂಚಾಲಕಿ ಉಷಾ ಗುರುದತ್ತ, ತಾಲ್ಲೂಕು ಸಂಚಾಲಕರಾದ ಅನಂತರಾಮ್ ಗೌತಮ್, ಜ್ಯೋತಿ ದೀಕ್ಷಿತ್,ಮಾರುತಿ ಮೋಹನ್, ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಮಾಣಿಕ್ಯ ಸತ್ಯನಾರಾಯಣ,ಡಿ.ಕಾವೇರಿ ಸುರೇಶ್ ಯಾದವ್,ಹರಿತ, ದೊಡ್ಡಜ್ಜಯ್ಯ , ಸುನೀತ, ಯತೀಶ್ ಎಂ ಸಿದ್ದಾಪುರ, ಯಶೋಧಾ ಪ್ರಕಾಶ್, ವಿಜಯಲಕ್ಷ್ಮೀ, ರಶ್ಮಿ ರಮೇಶ್, ನಾಗರತ್ನಮ್ಮ, ಸೇರಿದಂತೆ ವಿವಿಧ ತಾಲ್ಲೂಕುಗಳ ಸ್ತೋತ್ರ ಪಾರಾಯಣ ಮಾಡುವ ಸದ್ಭಕರು ಪಾಲ್ಗೊಂಡಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading