December 14, 2025
IMG-20250223-WA0027.jpg

ನಾಯಕನಹಟ್ಟಿ:: ನಾಟಕಗಳು ನಮ್ಮ ನಾಡಿನ ಸಂಸ್ಕೃತಿ ಸಂಸ್ಕಾರ ಹಾಗೂ ಮಾನವೀಯ ಮೌಲ್ಯಗಳನ್ನು ಕಲಿಸಿ ಸಂಸ್ಕೃತಿಯ ಪ್ರತ್ಯೇಕವಾಗಿ ಉಳಿದಿವೆ ಎಂದು.ನಲಗೇತನಹಟ್ಟಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಪಿ.ಎನ್. ಮುತ್ತಯ್ಯ ಹೇಳಿದರು.

ಹೋಬಳಿಯ ನಲಗೇತನಹಟ್ಟಿ ಗ್ರಾ.ಪಂ. ವ್ಯಾಪ್ತಿಯ ರಾಮದುರ್ಗ ಗ್ರಾಮದಲ್ಲಿ ಶನಿವಾರ ರಾತ್ರಿ
ಶ್ರೀ ಮಂದ ಬೊಮ್ಮಲಿಂಗೇಶ್ವರ ಸ್ವಾಮಿ ಗುಗ್ಗರಿ ಹಬ್ಬದ ಪ್ರಯುಕ್ತ ಶ್ರೀ ಮಂದ ಬೊಮ್ಮಲಿಂಗೇಶ್ವರ ಕೃಪ ಪೋಷಿತ ನಾಟಕ ಕಲಾಸಂಘ ರಾಮದುರ್ಗ (ದೊಣಮಂಡಲಹಟ್ಟಿ) ಯಲ್ಲಿ

“ನುಂಕೆಮಲೆ ಸಿದ್ದೇಶ್ವರ ಮಹಾತ್ಮೆ ಅರ್ಥಾತ್ ಹರಳಯ್ಯನ ಭಕ್ತಿ ಪ್ರಭಾವ

ಎಂಬ ಯಕ್ಷಗಾನ ನಾಟಕವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ನಂತರ ಮಾತನಾಡಿದರು. ಯಕ್ಷಗಾನ ಪೌರಾಣಿಕ ಸಾಮಾಜಿಕ ನಾಟಕಗಳು ನಮ್ಮ ಬದುಕಿನ ಅವಿಭಾಜ್ಯ ಅಂಗ ದುಃಖ ದುಮ್ಮಾನ ಸಂಕಟ ವೇದನೆ ದೂರ ಮಾಡಿ ಮನಸ್ಸನ್ನು ಹಗೂರಗೊಳಿಸುವ ಕೆಲಸ ಮಾಡುತ್ತವೆ. ಮೊಬೈಲ್ ಟಿವಿ ಹಾವಳಿಯಿಂದ ಗ್ರಾಮೀಣ ಪ್ರದೇಶದ ನಾಟಕಗಳು ಕಣ್ಮರೆಯಾಗುತ್ತವೆ ಅವುಗಳನ್ನು ಉಳಿಸಬೇಕು ಎಂದು ಗ್ರಾಮಸ್ಥರಿಗೆ ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಬೈಲಾಟ ಅಕಾಡೆಮಿ ಸದಸ್ಯ ಯರ್ರನಹಳ್ಳಿ ಬಿ. ಮಾರನಾಯಕ, ನಲಗೇತನಹಟ್ಟಿ ಗ್ರಾ. ಪಂ. ಸದಸ್ಯರಾದ ಬಂಗಾರಯ್ಯ, ಕೆ.ಬಿ. ಬೋಸಯ್ಯ, ಶ್ರೀಮತಿ ದ್ರಾಕ್ಷಾಯಣಮ್ಮ ಚಿದಾನಂದ, ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಬೊಮ್ಮಯ್ಯ, ಗ್ರಾಮಸ್ಥರಾದ ಜಿ.ಕೆ. ಓಬಯ್ಯ,ಗೋ/ ಬಸವರಾಜ್, ಪೂಜಾರಿ ದೊಡ್ಡ ಓಬಯ್ಯ, ಪೂಜಾರಿ ಸಿದ್ದಪ್ಪ, ಗೌಡ್ರು ಬಂಗಾರಯ್ಯ, ಎತ್ತಿನ ಕಿಲಾರಿ ಎ.ಓ. ವೆಂಕಟೇಶ್, ನ್ಯಾಯರ ಬೊಮ್ಮಯ್ಯ, ದಾಸರ ಬಂಗಾರಯ್ಯ, ಗಾರೆಮನೆ ಬಂಗಾರಯ್ಯ, ಕಿಲಾರಿ ಬೋಸಯ್ಯ, ಎತ್ತಿನ ಓಬಯ್ಯ, ಟಿ. ಚಿನ್ನಯ್ಯ, ಜಿ. ಅಜ್ಜಯ್ಯ, ಪೂ.ಚಂದ್ರಪ್ಪ, ಪೆದ್ದಪಾಪಯ್ಯ, ಕಾ.ಪಾಲಯ್ಯ, ಮಲ್ಲಯ್ಯ,ಟಿ. ರಾಜಣ್ಣ, ಬೊಮ್ಮದೇವರ ಪೂಜಾರಿ ಸಣ್ಣೋಬಯ್ಯ, ಹಾಗೂ ಸಮಸ್ತ ರಾಮದುರ್ಗ ಗ್ರಾಮಸ್ಥರು ಇದ್ದರು

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading