ಹಿರಿಯೂರು ತಾಲೂಕು ಕನ್ನಡ ಜಾನಪದ ಪರಿಷತ್ ಅಧ್ಯಕ್ಷರಾಗಿ ಶಿಕ್ಷಕ ಎಸ್ ತಿಪ್ಪೆಸ್ವಾಮಿ
ಆಯ್ಕೆಯಾಗಿದ್ದಾರೆ
ಕರ್ನಾಟಕ ರಾಜ್ಯದ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಡಾ ಬಾಲಾಜಿ ಮತ್ತು ಚಿತ್ರದುರ್ಗ ಜಿಲ್ಲಾಧ್ಯಕ್ಷರಾದ ಬಿ ಮೈಲಾರಪ್ಪ ಅವರು ಜನಪದ ಕಲೆ ಮತ್ತು ಸಾಹಿತ್ಯದ ಉಳಿವು ಮತ್ತು ಬೆಳವಣಿಗೆಗೆ ಶ್ರಮಿಸಿದ ಶಿಕ್ಷಕ ಎಸ್ ತಿಪ್ಪೆಸ್ವಾಮಿ
ಅವರ ಅನನ್ಯ ಸೇವೆಯನ್ನು ಪರಿಗಣಿಸಿ ಹಿರಿಯೂರು ತಾಲೂಕು ಕನ್ನಡ ಜಾನಪದ ಪರಿಷತ್ನ ತಾಲೂಕು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಹಳ್ಳಿಗಳಲ್ಲಿನ ಜನಪದ ಕಲಾವಿದರು ಸಾಹಿತಿಗಳು ಹಳ್ಳಿಗಾಡಿನ ವಿವಿಧ ಕಲಾ ತಂಡಗಳ ಕಲಾವಿದರಲ್ಲಿನ ಸಾಹಿತ್ಯ ಕಲೆಗಳನ್ನು ಉಳಿಸಿ ಬೆಳೆಸುವ ಮೂಲಕ ನಮ್ಮ ದೇಶೀ ಕಲೆ ಮತ್ತು ಸಾಹಿತ್ಯವನ್ನು ಅಭಿವೃಧ್ದಿಗೊಳಿಸುವ ಹೊಣೆಯನ್ನೂ ನೂತನ ತಾಲೂಕು ಅಧ್ಯಕ್ಷರಿಗೆ ವಹಿಸಲಾಗಿದೆ ಎಂದು ತಿಳಿಸಿದ್ದಾರೆ
(ಪೋಟೋ ಸಿಟಿಎ ಜಾನಪದ ೨೨)
ಹಿರಿಯೂರು ತಾಲೂಕು ಕನ್ನಡ ಜಾನಪದ ಪರಿಷತ್ ಅಧ್ಯಕ್ಷರಾಗಿ ಶಿಕ್ಷಕ ಎಸ್ ತಿಪ್ಪೆಸ್ವಾಮಿ
About The Author
Discover more from JANADHWANI NEWS
Subscribe to get the latest posts sent to your email.