January 29, 2026
IMG-20251122-WA0232.jpg

ಚಳ್ಳಕೆರೆ ನ.22 ಮನೆ ಬೀಗ ಮುರಿದು ಹಣ ಚಿನ್ನದ ಒಡೆವೆ ಕಳವು ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ತಳಕು ಹಾಗೂ ಪರಶುರಾಂಪುರ ಪೋಲಿಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹೌದು ತಳಕು ಠಾಣೆ
ವ್ಯಾಪ್ತಿಯ ಹೊನ್ನೂರು ಗ್ರಾಮದ ಧನಂಜಯರೆಡ್ಡಿ ಇವರ ಮನೆಯಲ್ಲಿ ನವಂಬರ್ 1 ರ ಮಧ್ಯಾಹ್ನ 2
ಗಂಟೆ ಸುಮಾರಿನಲ್ಲಿ
ಮನೆಯ ಬಾಗಿಲಿನ ಇಂಟರ್ ಲಾಕ್
ಮುರಿದು ಮನೆಯೊಳಗೆ ಪ್ರವೇಶ ಮಾಡಿ ಬೀರುವಿನ ಲಾಕ್ ಮುರಿದು ಅದರಲ್ಲಿದ್ದ 5 ಸಾವಿರ ನಗದು ಮತ್ತು
40 ಸಾವಿರ ರೂ ಬೆಲೆಬಾಳುವ ಬಂಗಾರದ ಆಭರಣಗಳನ್ನು ಕಳವು ಮಾಡಲಾಗಿದ್ದು ತಳಕು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಎಸ್ಪಿ ರಂಜಿತ್ ಕುಮಾರ ಬಂಡಾರು.ಹೆಚ್ಚುವರಿ ಎಸ್ಪಿ ಡಾ.ಶಿವಕುಮಾರ್. ಬಂಡಾರು ಹಾಗೂ ಡಿವೈಎಸ್ಪಿ ಸತ್ಯನಾರಾಯಣರಾವ್ ಮಾರ್ಗದರ್ಶನ ದಲ್ಲಿ ಕಳ್ಳರ ಪತ್ತೆಗೆ ತಂಡ ರಚನೆ ಮಾಡಲಾಗಿತ್ತು
ಪೊಲೀಸ್ ವೃತ್ತ ನಿರೀಕ್ಷಕ ಹನುಮಂತಪ್ಪ ಎಂ ಶಿರೀಹಳ್ಳಿ ರವರ ನೇತೃತ್ವದಲ್ಲಿ ಪಿ.ಎಸ್.ಐ ಶಿವಕುಮಾರ ಕೆ,
ಪಿ.ಎಸ್.ಐ ಚೇತನ್, ಎ.ಎಸ್‌.ಐ ಮಂಜಣ್ಣ ಹಾಗೂ ಸಿಬ್ಬಂದಿಗಳಾದ ನಿತಿನ್ ಕುಮಾರ್, ಜಾಕೀರ್ ಹುಸೇನ್,
ಮಂಜುನಾಥ, ಧನಂಜಯ, ಜಗದೀಶ್, ವೀರೇಶ, ಮಾರೇಶ ಮತ್ತು ಪರಶುರಾಂಪುರ ಠಾಣೆಯ ಪಿ.ಎಸ್.ಐ ಮಾರುತಿ
ಹಾಗೂ ಸಿಬ್ಬಂದಿಗಳಾದ ಏಕಾಂತರೆಡ್ಡಿ, ಮಂಜುನಾಥ ಮುಡಕೆ ರವರನ್ನು ಒಳಗೊಂಡ ತಂಡವನ್ನು ರಚನೆ ಮಾಡಿ ಪತ್ತೆಗೆ
ನೇಮಿಸಿದ್ದು, ಸದರಿ ತಂಡವು ಆರೋಪಿಯಾದ ಆಂದ್ರಮೂಲದ ಶೇಖ್ ಖಾಜಾಪೀರ್ 32 ವರ್ಷದ ಆರೋಪಿಯನ್ನು ವಶಕ್ಕೆ ಪಡೆದು
70,ಸಾವಿರ ಮೌಲ್ಯದ ಚಿನ್ನದ ಒಡೆವೆ ಹಾಗೂ &
2 ಸಾವಿರ ರೂ ನಗದು ಹಣ ಹಾಗೂ ಪರಶುರಾಂಪುರ ಪೊಲೀಸ್ ಠಾಣೆಯ ಸಂಬಂಧಿಸಿದಂತೆ
ಸುಮಾರು 3,50 ಲಕ್ಷರೂ ಮೌಲ್ಯದ 27 ಗ್ರಾಂ ಚಿನ್ನದ ಒಡೆವೆ ಪಡಿಸಿಕೊಂಡು
ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ.
ಸದರಿ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಮಾನ್ಯ ಪೊಲೀಸ್ ಅಧೀಕ್ಷಕರ ರಂಜಿತ್ ಕುಮಾರ್ ಬಂಡಾರು ಚ ಶ್ಲಾಘಿಸಿದ್ದಾರೆ

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading