
ಚಳ್ಳಕೆರೆ: ಬೈಕ್ ಗಳಿಗೆ ಪೆಟ್ರೋಲ್ ಹಾಕುವ ವೇಳೆ ಗ್ರಾಹಕರಿಗೆ ಇಲ್ಲಿನ ಸಿಬ್ಬಂದ ವಚನೆ ಮಾಡುತ್ತಾರೆ ಎಂದು ರೈತರು ಪೆಟ್ರೋಲ್ ಬಂಕಿನ ಸಿಬ್ಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಚಳ್ಳಕೆರೆ ನಗರದ ಖಾಸಗಿ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಿರುವ ಭರತ್ ಪೆಟ್ರೋಲ್ ಬಂಕ್ ನಲ್ಲಿ ಗ್ರಾಹಕರಿಗೆ ವಂಚನೆ ನೂರು ರೂಪಾಯಿ ಪೆಟ್ರೋಲ್ ಹಾಕಿಸಿದರೆ 60 ರೂಪಾಯಿ ಪೆಟ್ರೋಲ್ ಹಾಕಿ 40 ರೂ ವಂಚನೆ ಮಾಡಿರುವುದು ಪತ್ತೆ ಹಚ್ಚಿದ ಗ್ರಾಹಕ ಪೆಟ್ರೊಲ್ ಬಂಕ್ ಸಿಬ್ಬಂದಿ ವಿರುದ್ದ ಅಕ್ರೋಶ ಹೊರಹಾಕಿದ್ದಾರೆ.
ಪಾವಗಡ ತಾಲೂಕಿನ ಕೆಂಚ್ಚಮ್ಮನಹಳ್ಳಿ ಗ್ರಾಮದ ಕೃಷ್ಣಪ್ಪ ಎಂಬ ವ್ಯಕ್ತಿ ಚಿತ್ರದುರ್ಗದಿಂದ ಪಾವಗಡಕ್ಕೆ ತೆರಳುವ ಮಾರ್ಗದ ಮಧ್ಯೆ ಚಳ್ಳಕೆರೆ ಖಾಸಗಿ ಬಸ್ ನಿಲ್ದಾಣದ ಸಮೀಪ ಇರುವ ಭರತ್ ಪೆಟ್ರೋಲ್ ಬಂಕ್ ನಲ್ಲಿ ನೂರು ರೂಪಾಯಿ ಪೆಟ್ರೋಲ್ ಹಾಕಲು ತಿಳಿಸಿದ್ದು. ಪೆಟ್ರೋಲ್ ಬಂಕಿನ ಸಿಬ್ಬಂದಿ ಬರಿ 60 ರೂಪಾಯಿ ಪೆಟ್ರೋಲ್ ಹಾಕಿದ್ದು ಪ್ರತ್ಯಕ್ಷವಾಗಿ ಕಂಡು ಕೃಷ್ಣಪ್ಪ. ಬೈಕ್ ಸವಾರರಿಗೆ ವಂಚನೆ ಮಾಡುತ್ತಿರುವುದನ್ನು ಕಂಡು ಪೆಟ್ರೋಲ್ ಬಂಕಿನ ಸಿಂಬ್ಬಂದಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದರು. ಬಂಕ್ ನ ಮಾಲಿಕ ಸ್ಥಳಕ್ಕೆ ಬರುವವರೆಗೂ ಯಾರಿಗೂ ಪೆಟ್ರೋಲ್ ಹಾಕದಂತೆ ತಾಕಿತು ಮಾಡಿದರು. ಈ ವೇಳೆ ಪೆಟ್ರೋಲ್ ಬಂಕಿನ ಸಿಬ್ಬಂದಿಗು ಹಾಗೂ ರೈತರಿಗೂ ಮಾತಿನ ಚಕಮಕಿ ನಡೆಯಿತು….
About The Author
Discover more from JANADHWANI NEWS
Subscribe to get the latest posts sent to your email.