December 14, 2025
IMG-20241022-WA0286.jpg

ನಾಯಕನಹಟ್ಟಿ :
ನಾಯಕನಹಟ್ಟಿ ಸಮೀಪ ಇರುವ ಓಬಯ್ಯನಹಟ್ಟಿ ಗ್ರಾಮಕ್ಕೆ ಹೋಗುವ ಮುಖ್ಯ ದಾರಿ ಕೆಳೆದ ವಾರದಿಂದ ಸುರಿದ ಮಳೆಗೆ ಸೇತುವೆ ಬಿದ್ದು ಹೋಗಿದೆ, ಸಂಚಾರ ಸ್ಥಗಿತ ಆಗಿದ್ದು ಆಟೋ, ಬಸ್ಸು, ಟೆಂಪ್, ಟ್ಯಾಕ್ರರ್ ವಾಹನಗಳಿಗೆ ಸಂಚಾರ ಬಂದ್ ಆಗಿದೆ, ಎರಡು ಮೂರು ಭಾರಿ ಈ ಸೇತುವೆ ಕಾಮಗಾರಿ ಆದರೂ ಏನೋ ಪ್ರಯೋಜವಾಗಿಲ್ಲ ಮೇಲುಸೇತುವೆ ಮಾಡಬೇಕು, ಇಲ್ಲಿ ಪ್ರತಿದಿನ ದಿನ ಇದೇ ದಾರಿಯಲ್ಲಿ ನಾಯಕನಹಟ್ಟಿ, ತಳಕು, ಚಳ್ಳಕೆರೆ ಜಗಳೂರು ಮಾರ್ಗ ಹೋಗುವ ದಾರಿಯಾಗಿದ್ದು, ಈ ದಾರಿಯಲ್ಲಿ ಶಾಲೆ ಕಾಲೇಜ್‌ಗಳಿಗೆ ಹೋಗುವ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ಆಟೋ, ಬಸ್ಸು, ಬೈಕ್‌ಗಳು ಇದೇ ದಾರಿಯಲ್ಲಿ ಸಂಚಾರ ಮಾಡುತ್ತಿದ್ದು, ಬೇರೆ ಊರುಗಳಿಂದ ಬಂದವರು ಈ ಸೇತುವೆ ಹತ್ತಿರ ಬಿದ್ದು ಹೋಗಿದ್ದಾರೆ, ಸ್ಥಳೀಯ ಶಾಸಕರು, ಸಂಸದರು, ಸಂಬAಧಪಟ್ಟ ಅಧಿಕಾರಿಗಳು ಈ ದಾರಿಯ ದುರಸ್ಥಿಯನ್ನು ಬಗ್ಗೆ ಗಮನಹರಿಸಿ ಅತಿ ಶ್ರೀಘ್ರದಲ್ಲಿ ಕಾಮಗಾರಿಯನ್ನು ಶುರು ಮಾಡಿಸಿ ಸಂಚಾರ ಮಾಡಲು ಅವಕಾಶ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಈ ಸಂಧರ್ಭದಲ್ಲಿ ಊರಿನ ಮುಖಂಡರಾದ ಬೋರಯ್ಯ, ಎಸ್.ಡಿ.ಎಂ.ಸಿ ಅಧ್ಯಕ್ಷ ಪರ್ವತಯ್ಯ, ಉಪಾಧ್ಯಕ್ಷ ಆರ್ ಓಬಜ್ಜ, ಹಸಿರು ಸೇನೆ ಜಿಲ್ಲಾ ಕಾರ್ಯದರ್ಶಿ ಆರ್. ನವೀನ್, ನಿಂಗೇಶ್, ಪ್ರದೀಪ್, ನವೀನ್, ಮಹದೇವಣ್ಣ, ರವಿ, ಮಂಜಣ್ಣ ಇನ್ನೂ ಮುತಾಂದವರು ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading