ನಾಯಕನಹಟ್ಟಿ:: ಗ್ರಾಮೀಣ ಪ್ರದೇಶದ ಬಡ ಜನರಿಗೆ ಸರ್ಕಾರ ನಾನ ಯೋಜನೆಗಳನ್ನ ಜಾರಿಗೆ ತಂದಿದೆ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು ಉತ್ತಮವಾಗಿ ಜೀವನ ನಡೆಸಲು ಮುಂದಾಗಬೇಕು ಎಂದು ಗ್ರಾಮ ಪಂಚಾಯತಿ ಅಧ್ಯಕ್ಷ ಬಿ ತಿಪ್ಪೇಸ್ವಾಮಿ ಹೇಳಿದ್ದಾರೆ.
ಮಂಗಳವಾರ ಹೋಬಳಿಯ ಎನ್ ಮಹದೇವಪುರ ಗ್ರಾಮ ಪಂಚಾಯಿತಿ ಆವರಣದಲ್ಲಿ ಆಯೋಜಿಸಿದ್ದ
2023- 24ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಇತರೆ ಅನುಷ್ಠಾನ ಇಲಾಖೆ ಮತ್ತು 15ನೇ ಹಣಕಾಸಿನ ಆಯೋಗದ ಅಡಿಯಲ್ಲಿ ಪಾವತಿ ಆಗಿರುವ ಕಾಮಗಾರಿ ಖರ್ಚು ವೆಚ್ಚದ ಬಗ್ಗೆ ಸಾಮಾಜಿಕ ಪರಿಶೋಧನೆ ಗ್ರಾಮ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇನ್ನೂ ಸಭೆಯಲ್ಲಿ 2023 -24ನೇ ಸಾಲಿನ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಲೆಕ್ಕ ಪರಿಶೋಧನೆಯ ಈ ರೀತಿಯಾಗಿದೆ.
2023-24ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿ ಅನುಷ್ಠಾನಗೊಂಡ ಕಾಮಗಾರಿಗಳು ಒಟ್ಟು 123 ಕಾಮಗಾರಿಗಳು.
ಕೂಲಿ
89.15.260.
ಸಾಮಗ್ರಿ-20.80.385.
ಒಟ್ಟು ಅನುದಾನ.₹10.99.5645.
ಇದೆ ವೇಳೆ ಪಿಡಿಒ ಎಸ್ ರಾಘವೇಂದ್ರ ಮಾತನಾಡಿ 2023 -24 ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಲೆಕ್ಕಪರಿಶೋಧನೆ ಗ್ರಾಮ ಸಭೆಯಲ್ಲಿ ಅಭಿವೃದ್ಧಿ ಪಡಿಸಲು ಗ್ರಾಮ ಪಂಚಾಯತಿಗೆ ಬಂದಿರುವ ಅನುದಾನದ ಲೆಕ್ಕ ಪರಿಶೋಧನೆ ನಡೆಸಲಾಗಿದೆ ಗ್ರಾಮಸ್ಥರು ಮಾಹಿತಿಯನ್ನು ತಿಳಿಯಲು ಸೂಚನೆಯನ್ನು ನೀಡಿದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ. ಎಂ ಓಬಳೇಶಪ್ಪ, ಪಿ.ಪಿ. ಶ್ವೇತಾ ಪಟೇಲ್, ಸೈಯದ್ ಅಕ್ತರ್ ಬಾನು, ಎಂ,ಪಾಲಯ್ಯ ಚಳ್ಳಕೆರೆ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಸಾಮಾಜಿಕ ಪರಿಶೋಧನಾ ಅಧಿಕಾರಿ ಆರ್ ಗಿರೀಶ್ ಕುಮಾರ್, ಗ್ರಾಮಸ್ಥರಾದ ನಾಗಣ್ಣ, ಮಾಜಿ ಗ್ರಾ.ಪಂ. ಅಧ್ಯಕ್ಷರು ಬಗರ್ ಹುಕ್ಕಂ ಕಮಿಟಿ ಸದಸ್ಯ ಪಿ.ಜಿ ಬೋರ ನಾಯಕ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಿ ಎಂ ತಿಪ್ಪೇಸ್ವಾಮಿ, ಗ್ರಾಮ ಪಂಚಾಯತಿ ಸಿಬ್ಬಂದಿಗಳಾದ ಎಸ್ ಯೋಗೇಂದ್ರ ಬಿಲ್ ಕಲೆಕ್ಟರ್, ಜಿ. ತಿಪ್ಪೇರುದ್ರಪ್ಪ ಗಣಕಯಂತ್ರ ನಿರ್ವಾಹಕರು, ಬಿಎಫ್ಪಿ ಜಿ.ಎಂ ಚಿದಾನಂದ, ಜಿ.ಕೆ. ಭವ್ಯ, ಸಿಬ್ಬಂದಿ ಆರ್ ಬಿ. ರಾಜೇಶ್ ಹಾಗೂ ಗ್ರಾಮಸ್ಥರು ಗ್ರಾಮ ಪಂಚಾಯತಿಯ ವಿವಿಧ ಹಳ್ಳಿಗಳ ಜನರು ಇದ್ದರು
About The Author
Discover more from JANADHWANI NEWS
Subscribe to get the latest posts sent to your email.