
ನಾಯಕನಹಟ್ಟಿ ::ಹೋಬಳಿಯ ತಿಮ್ಮಪ್ಪಯ್ಯನಹಳ್ಳಿ ಗ್ರಾ.ಪಂ. ವ್ಯಾಪ್ತಿಯ.ಗಜ್ಜುಗಾನಹಳ್ಳಿ ಗ್ರಾಮದ ಪ್ರಗತಿಪರ ರೈತರದ ಡಿ ಬೋರಯ್ಯನವರ ಜಮೀನಿನಲ್ಲಿ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಜಮೀನಿನಲ್ಲಿರುವ ಕಟ್ಟೆ ಹೊಡೆದು ದಾಳಿಂಬ್ರೆ ಗಿಡ ಕೊಚ್ಚಿಹೋಗಿವೆ ಎಂದು ಪ್ರಗತಿಪರ ರೈತ ಡಿ. ಬೋರಯ್ಯ ಹೇಳಿದ್ದಾರೆ.
ಮಂಗಳವಾರ ಗಜ್ಜುಗಾನಹಳ್ಳಿ ತಮ್ಮ ಜಮೀನಿನಲ್ಲಿ ಸೋಮವಾರ ತಡರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಜಮೀನಿನಲ್ಲಿರುವ 1350 . ದಾಳಿಂಬರೆ ಸಸಿ ಸಂಪೂರ್ಣವಾಗಿ ಜಲಾವೃತಗೊಂಡಿವೆ ಬಸಿಲಿಗೆ ಬಂದ ದಾಳಿಂಬರೆ ಸಸಿಗಳು ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ಗೊಬ್ಬರ ಮಲ್ಟಿ ಪೇಪರ್ ಹಾಕಿ ದಾಳಿಂಬರೆ ಗಿಡಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ಕೆಲಸವನ್ನ ಮಾಡಿದ್ವಿ ಪ್ರಕೃತಿ ವಿಕೋಪದಿಂದ ಕಡ ರಾತ್ರಿ ಸುರಿದಂತ ಮಳೆಗೆ ಈ ಅನಾಹುತವಾಗಿದೆ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಮೂಲಕ ಮಾಹಿತಿಯನ್ನು ತಿಳಿಸಿದರೆ ನಾನು ಅಲ್ಲಿದ್ದೇನೆ ಇಲ್ಲಿದ್ದೇನೆ ಎಂದು ಸೊಬೂಬು ಹೇಳುತ್ತಾರೆ. ನಾಯಕನಹಟ್ಟಿ ದೊಡ್ಡ ಕೆರೆ ಮತ್ತು ಚಿಕ್ಕಕೆರೆ, ಕೋಡಿ ಬಿದ್ದ ಹಿನ್ನೆಲೆಯಲ್ಲಿ ನಮ್ಮ ಹಳ್ಳದಲ್ಲಿ ನೀರು ಅರಿಯುತ್ತಿದ್ದು ಜಮೀನಿನಲ್ಲಿ ನೀರು ತುಂಬಿದೆ ಭಯದ ವಾತಾವರಣದಲ್ಲಿ ಜೀವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ರಾತ್ರಿ ಇಡೀ ನಿದ್ದೆ ಇಲ್ಲದೆ ಪರಿತಪಿಸುವಂತಾಗಿದೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಧಾವಿಸಿ, ಪರಿಹಾರವನ್ನು ನೀಡಬೇಕು ಎಂದು ಬೇಸರವನ್ನು ವ್ಯಕ್ತಪಡಿಸಿದ್ದಾರೆ.
About The Author
Discover more from JANADHWANI NEWS
Subscribe to get the latest posts sent to your email.