ಚಿತ್ರದುರ್ಗಫೆ.22:
ಇ-ಖಾತಾ ಅಭಿಯಾನ ಮತ್ತು ಸಹಾಯವಾಣಿ ಕೇಂದ್ರಕ್ಕೆ ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಶನಿವಾರ ಚಾಲನೆ ನೀಡಿದರು.
ಹಿರಿಯೂರು ನಗರಸಭೆ ಆವರಣದಲ್ಲಿ ಶನಿವಾರ ಇ-ಆಸ್ತಿ ಕುರಿತು (ಪ್ರಾಪರ್ಟಿ ರಿಜಿಸ್ಟರ್ ಎ ಮತ್ತು ಪ್ರಾಪರ್ಟಿ ರಿಜಿಸ್ಟ್ ಬಿ) ತಯಾರಿಸುವ, ನಮೂನೆ-3 ಮತ್ತು ನಮೂನೆ-3ಎ ಸೃಜಿಸಲು ಅನುವಾಗುವಂತೆ ಹಿರಯೂರು ನಗರಸಭೆ ವ್ಯಾಪ್ತಿಯಲ್ಲಿ ಪ್ರಾಪರ್ಟಿ ರಿಜಿಸ್ಟರ್ –ಎ ಮತ್ತು ಬಿನಲ್ಲಿ ಆಸ್ತಿಗಳಿಗೆ ನೀಡಿರುವ ನಿರ್ದೇಶನದಂತೆ ಹಿರಿಯೂರು ನಗರಸಭೆ ವತಿಯಿಂದ ಇ-ಖಾತಾ ಅಭಿಯಾನ ಏರ್ಪಡಿಸಲಾಗಿದ್ದು, ಇ-ಖಾತಾ ಅಭಿಯಾನ ಮತ್ತು ಸಹಾಯವಾಣಿ ಕೇಂದ್ರಕ್ಕೆ ಸಚಿವರು ಚಾಲನೆ ನೀಡಿದರು.
ಹಿರಿಯೂರು ನಗರಸಭೆ ವ್ಯಾಪ್ತಿಯ ವಾರ್ಡ್ ನಂ.1, 2, 3 ಮತ್ತು 4ರಲ್ಲಿ ನಮೂನೆ-3 (ಎ-ರಿಜಿಸ್ಟರ್) ಮತ್ತು ನಮೂನೆ-3ಎ (ಬಿ-ರಿಜಿಸ್ಟರ್)ಗಳ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಅಭಿಯಾನದಲ್ಲಿ ನಗರಸಭೆ ಅಧ್ಯಕ್ಷ ಅಜಯ್ ಕುಮಾರ್, ಉಪಾಧ್ಯಕ್ಷೆ ಅಂಬಿಕಾ, ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಎಸ್.ಅನಿಲ್ ಕುಮಾರ್, ಸದಸ್ಯರಾದ ಜಿ.ಎಸ್.ತಿಪ್ಪೇಸ್ವಾಮಿ, ಎಸ್.ಶಿವರಂಜನಿ, ಚಿತ್ರಜಿತ್ ಯಾದವ್ ಸೇರಿದಂತೆ ಪೌರಾಯುಕ್ತರು ಹಾಗೂ ಕಚೇರಿ ಸಿಬ್ಬಂದಿ ಇದ್ದರು.




About The Author
Discover more from JANADHWANI NEWS
Subscribe to get the latest posts sent to your email.