December 15, 2025
IMG-20250222-WA0030.jpg

ಬೆಂಗಳೂರು

ಪರಶುರಾಂಪುರ ಹೋಬಳಿ ಕೇಂದ್ರವನ್ನು ತಾಕುಕು ಕೇಂದ್ರ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಅಖಂಡ ಕರ್ನಾಟಕ ರಾಜ್ಯ ರೈತ ಸಂಖ್ಯ ಮುಖ್ಯ ಮಂತ್ರಿ ಸಿದ್ದರಾಮಯ್ಯ ಬಳಿ ಮನವಿ ಮಾಡಿದ್ದಾರೆ.

ಚಳ್ಳಕೆರೆ ತಾಲೂಕು ಪಿ. ಮಹಾದೇವಪುರ ಗ್ರಾಮದಲ್ಲಿ ಈಗಾಗಲೇ ಮಂಜೂರಾಗಿರುವ ಕೆಇಬಿ ಸಬ್ ಸ್ಟೇಶನ್ ಗೆ ಅನುದಾನ ಬಿಡುಗಡೆ ಗೊಳಿಸಿ ಈ ಭಾಗದ ಸುಮಾರು ಹಳ್ಳಿಯ ರೈತರಿಗೆ ಸುಡು ಬೇಸಿಗೆಯಲ್ಲಿ ವೋಲ್ಟೇಜ್ ಸಹಿತ ಕರೆಂಟ್ ನೀಡಲು ಮನವಿ ಮಾಡಿದರು, ಬರಿ ಅಲಂಕಾರಕ್ಕೆ ಸೀಮಿತವಾಗಿರುವ ಬಂಗಾರಕ್ಕೆ ಇರುವ ಬೆಲೆ ಬದುಕಲಿಕ್ಕೆ ಬೇಕಾಗುವ ಅನ್ನಕ್ಕೆ ಈ ದೇಶದಲ್ಲಿ ಬೆಲೆ ಇಲ್ಲ ಏಕೆ ಎಂದು ಪ್ರಶ್ನಿಸಿ ಬಂಗಾರ ಅಡವಿಟ್ಟು ಕೊಳ್ಳುವಂತೆ ರೈತರು ಬೆಳೆದ ಬೆಳೆಗಳನ್ನು ಅಡವಿರಿಸಿಕೊಂಡು ಶೇಕಡ 80 ಭಾಗ ಹಣವನ್ನು ಕೊಡಲು ಸುಮಾರು 20 ಸಾವಿರ ಕೋಟಿ ಆವರ್ತನಿಧಿ ಮೀಸಲಿರಿಸಬೇಕೆಂದು ಮನವಿ ನೀಡಿದರು, ಹಿಂದಿನ ಸರ್ಕಾರ ಭೂಮಿಯ ಒಡೆತನ 50 ಎಕರೆಯಿಂದ 510 ಎಕರೆಗೆ ಕಾನೂನು ರೂಪಿಸಿದ್ದು ಇದನ್ನು ಈ ಕೂಡಲೇ ತೆಗೆದು 50 ಎಕರೆಗೆ ಸೀಮಿತಗೊಳಿಸಬೇಕೆಂದು ಮನವಿ ನೀಡಿದರು, ರೈತರ ವಿದ್ಯುತ್ ಪರಿವರ್ತಕ ಕೆಟ್ಟ 24 ಗಂಟೆಗಳಲ್ಲಿ ಪರಿವರ್ತಕವನ್ನು ಬದಲಾಯಿಸಿ ಕೊಡಬೇಕೆಂದು ಕಾನೂನಿದ್ದರೂ ಕೂಡ ಸುಟ್ಟು 7 – 8 ದಿನಗಳಾದರೂ ಬದಲಾಯಿಸಿಕೊಡುವುದಿಲ್ಲ ಪರಿವರ್ತಕವನ್ನು ರೈತರ ಜಮೀನಿಗೆ ಸರ್ಕಾರವೇ ತಂದು 24 ಗಂಟೆಗಳಲ್ಲಿ ವಿದ್ಯುತ್ ಕೊಡಬೇಕೆಂದು ಮನವಿ ನೀಡಿದರು, ಚಿತ್ರದುರ್ಗ ಜಿಲ್ಲೆಯ ಮುಖ್ಯ ಬೆಳೆಗಳಾದ ಈರುಳ್ಳಿ ಟೊಮೊಟೊ ಮತ್ತು ಶೇಂಗಾಕ್ಕೆ ನಿಗದಿತ ಬೆಲೆ ನೀಡಿರುವುದು ಎಂದು ಮನವಿ ಮಾಡಿದರು,

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading