ಚಳ್ಳಕೆರೆ ಜ.22
ಕಟ್ಟಡ ನಿರ್ಮಾಣಕ್ಕೆ ತಳಪಾಯ ಮುಖ್ಯ ತಳಪಾಯ ಕಟ್ಟಿಯಿಲ್ಲದಿದ್ದರೆ ಬಹುದಿನ ಬಾಳಿಕೆ ಬರುವುದಿಲ್ಲ ಎಂದು ಶಾಸಕ ಟಿ.ರಘುಮೂರ್ತಿ ಕಿವಿಮಾತು ಹೇಳಿದರು.
ನಗರದ ತ್ಯಾಗರಾಜ ನಗರದ ನಗರ,ಪಿರಮಿಡ್ ಪಾರ್ಕ್ ಸಮೀಪ
ಇಬ್ರಾ ಯೂನಿವರ್ಸಲ್ ಎಜುಶೇಷನಲ್ ಮತ್ತು ವೆಲ್ಫೇರ್ ಟ್ರಸ್ಟ್ ವತಿಯಿಂಸ ಇಬ್ರಾ ಕಂಪ್ಯೂಟರ್ ಸೆಂಟರ್ ಸುಮಾರು 70 ಲಕ್ಷ ರೂ ವೆಚ್ಚದ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಕಟ್ಟಡ ಪಿಲ್ಲರ್ ಗುಂಡಿಗಳು ಗಟ್ಟಿ ಮಣ್ಣುಸಿಗುವ ತನಕ ಗುಂಡಿ ತೆಗೆದು ನಂತರ ಪಿಲ್ಲರ್ ಹಾಕಿ ಕಟ್ಟಡ ಕಾಮಗಾರಿ ಗುಣಮಟ್ಟ ನಿರ್ಮಿಸಿದಾಗ ಮಾತ್ರ ಬಹುದಿನಗಳ ಕಾಲ ಬಾಳಿಕೆ ಬರುತ್ತದೆ ಎಂದು ಇಂಜಿನಿಯರ್ ಗೆ ಸಲಹೆ ನೀಡಿದರು.
ಮುಸ್ಲಿಂ ಬಾದವರು ಒಗ್ಗಟ್ಟಿನಿಂದ ಎಜುಕೇಶನ್ ಟ್ರಸ್ಟ್ ಮಾಡಿ ಶಿಕ್ಷಣ ನೀಡುತ್ತಿರುವುದು ಒಳ್ಳೆಯ ಬೆಳವಳಿಗೆ ಆರ್ಥಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದ ಬಡ ಕುಟುಂಬದ ಮಕ್ಕಳಿಗೆ ಶಿಕ್ಷಣ ಸೌಲಭ್ಯ ದೊರೆಯುವಂತಾಗ ಬೇಕು ಎಂದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಜಯತುಂನ್ ಬಿ. ಉಪಾಧ್ಯಕ್ಷೆ ಸುಮ ಬರಮಣ್ಣ ಸದಸ್ಯರಾದ ರಾಘವೇಂದ್ರ.ವೀರಭದ್ರಪ್ಪ.ಅನ್ವರ್ .ಭದ್ರಿ. ಗ್ಯಾರೆಂಟಿ ಸಮಿತಿ ಅಧ್ಯಕ್ಷ ಗದ್ದಿಗೆತಿಪ್ಪೇಸ್ವಾಮಿ.ಇಬ್ರಾ ಯೂನಿವರ್ಸಲ್ ಎಜುಶೇಷನಲ್ ಮತ್ತು ವೆಲ್ಫೇರ್ ಟ್ರಸ್ಟ್ ಪದಾಧಿಕಾರಿಗಳು ಮುಖಂಡರು ಇತರರಿದ್ದರು.





About The Author
Discover more from JANADHWANI NEWS
Subscribe to get the latest posts sent to your email.