December 14, 2025
IMG-20251121-WA0274.jpg

ವರದಿ: ಕೆ.ಟಿ.ಮೋಹನ್ ಕುಮಾರ್

ಸಾಲಿಗ್ರಾಮ (ಮೈಸೂರು ಜಿಲ್ಲೆ ): ಜನತಾದಳ (ಜಾತ್ಯತೀತ) ಪಕ್ಷವು ಸ್ಥಾಪನೆಗೊಂಡು 25 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಸಾಲಿಗ್ರಾಮ ಪಟ್ಟಣದ ಮಾಸ್ತಮ್ಮ ದೇವಸ್ಥಾನದ ಮುಂಭಾಗ ಜೆಡಿಎಸ್ ಮುಖಂಡರುಗಳು ರಜತ ಮಹೋತ್ಸವ ಸಂಭ್ರಮವನ್ನು ಸಾರ್ವಜನಿಕರಿಗೆ ಸಿಹಿ ವಿತರಿಸಿ, ಪಟಾಕಿ ಸಿಡಿಸಿ, ಜಯ ಘೋಷಣೆಗಳನ್ನು ಮೊಳಗಿಸಿ ಆಚರಣೆ ಮಾಡಿದರು.

ಈ ಸಂದರ್ಭದಲ್ಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಮೆಡಿಕಲ್ ರಾಜಣ್ಣ, ಸಾಲಿಗ್ರಾಮ ವಿ ಎಸ್ ಎಸ್ ಎನ್ ಅಧ್ಯಕ್ಷ ಸತೀಶ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಾಂಪುರ ಪುರುಷೋತ್ತಮ, ಮುಖಂಡರುಗಳಾದ ದಡದಹಳ್ಳಿ ನಟರಾಜ್, ಹೋಟೆಲ್ ರಾಮಣ್ಣ, ಮಾದಾಪುರ ಚಂದ್ರು, ಮಹದೇವ್, ಗೊಬ್ಬರದ ಅಂಗಡಿ ರಾಘು, ನರಸಿಂಹೇಗೌಡ, ರಾಂಪುರ ರಾಂಪುರ ರಾಘವೇಂದ್ರ, ರಂಗಪ್ಪಣ್ಣ, ಗೋಬಿಶಂಕರ್, ಗುಮ್ಮನಹಳ್ಳಿ ಸುರೇಶ್, ಶಿವಮೂರ್ತಿ, ಜೀಯಣ್ಣ ಸೇರಿದಂತೆ ಹಲವರು ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading