
ವರದಿ ಎಂ.ಶಿವಮೂರ್ತಿ
ನಾಯಕನಹಟ್ಟಿ: ಹೋಬಳಿಯ ನೆಲಗೇತನಹಟ್ಟಿ ಗ್ರಾಮದ ಪಿ ಎಂ ತಿಪ್ಪೇಸ್ವಾಮಿ ಟ್ಯಾಕ್ಟರನ್ನು ಅಜಾಗೂರಕತೆ ಮತ್ತು ನಿರ್ಲಕ್ಷತನದಿಂದ ಚಲಾಯಿಸಿ ಟ್ರ್ಯಾಕ್ಟರ್ ಪಲ್ಟಿಯಾಗಿ ಮೃತಪಟ್ಟಿದ್ದಾನೆ.
ನ. 20 ರಂದು ನೋಂದಣಿ ಸಂಖ್ಯೆ ಇಲ್ಲದ ಸೋನಾಲಿಕ ಕಂಪನಿಯ ಟ್ರ್ಯಾಕ್ಟರ್ ನಲ್ಲಿ ಗೊಲ್ಲಹಳ್ಳಿಯ ಜಮೀನಿನಲ್ಲಿ ಉಳಿಮೆ ಮಾಡಲು ಹೋಗಿದ್ದು, ಸಂಜೆ ಕೆಲಸ ಮುಗಿಸಿಕೊಂಡು ವಾಪಸ್ ನೆಲಗೇತನಹಟ್ಟಿ ಗ್ರಾಮಕ್ಕೆ ತೆರಳುವ ಸಂಜೆ ಸುಮಾರು 7 ಗಂಟೆ ಸಮಯದಲ್ಲಿ ಗೊಲ್ಲಹಳ್ಳಿ ಮತ್ತು ಎನ್ ಉಪ್ಪಾರಹಟ್ಟಿ ರಸ್ತೆಯಲ್ಲಿ ಪಿ ಎಂ ತಿಪ್ಪೇಸ್ವಾಮಿಯು ಟ್ರ್ಯಾಕ್ಟರ್ ಅನ್ನು ದುಡುಕಿ ಮತ್ತು ನಿರ್ಲಕ್ಷತನದಿಂದ ಚಾಲನೆ ಮಾಡಿಕೊಂಡು ಹೋಗಿ, ರಸ್ತೆ ಪಕ್ಕ ನಾಯಕನಹಟ್ಟಿ ದೊಡ್ಡ ಕೆರೆಯಲ್ಲಿ ಟ್ರ್ಯಾಕ್ಟರ್ ತಲೆಕೆಳಗಾಗಿ ಬೀಳಿಸಿಕೊಂಡು ನೀರಿನಲ್ಲಿ ಮೃತಪಟ್ಟಿದ್ದಾನೆ.
ಈ ಘಟನೆ ಕುರಿತಂತೆ ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
About The Author
Discover more from JANADHWANI NEWS
Subscribe to get the latest posts sent to your email.