
ಪಾವಗಡ ಜು.21
ವರದಿ: ಮದ್ಲೇಟಪ್ಪ ದವಡಬೆಟ್ಟ ಪಾವಗಡ
ಯೋಜನೆಗಳನ್ನು ಸಮರ್ಪಕವಾಗಿ ಕೊಡಲಾಗುತ್ತಿದೆ .ಈ ಭಾಗದ ಜನ ಮತ್ತೊಮ್ಮೆ ವೆಂಕಟೇಶ್ ರನ್ನು ಚುನಾವಣೆಯಲ್ಲಿ ಗೆಲ್ಲಿಸಬೇಕು ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪಾವಗಡ ತಾಲ್ಲೂಕಿನ ಶಾಸಕ ಹೆಚ್ ವಿ ವೆಂಕಟೇಶ್ ತಾಲ್ಲೂಕಿನ ಜನ ಸಿದ್ದರಾಮಯ್ಯನವರು ಇನ್ನೂ ಹತ್ತು ತಲೆಮಾರು ಜನ ಮರೆಯುವಾ ಆಗಿಲ್ಲ,ಫ್ಲೋರೈಡ್ ನೀರಿಗೆ ಹೆಸರುವಾಸಿಯಾಗಿದ ನಮ್ಮ ತಾಲ್ಲೂಕಿಗೆ ತುಂಗಭದ್ರಾ ಡ್ಯಾಮ್ ನಿಂದ ಕುಡಿಯುವ ನೀರು ಕಲ್ಪಿಸಲಾಗಿದೆ, ಪಾವಗಡವನ್ನು ವಿಶ್ವಮಟ್ಟದಲ್ಲಿ ಗುರುತಿಸುವ ಹಾಗೆ ಮಾಡಿದ್ದಾರೆ, ಸಿದ್ದರಾಮಯ್ಯನವರನ್ನು ಮರೆಯುವ ಆಗಿಲ್ಲ ,ಪಾವಗಡ ಪಾಲಿನ ದೇವರು ಸಿದ್ದರಾಮಯ್ಯನವರು ,ಪಾವಗಡಕ್ಕೆ ಮೇಗಾ ಡೈರಿಗೆ ಇನ್ನೂರು ಕೋಟಿ ನೀಡಬೇಕು, ಕೈಗಾರಿಕೆ ಮತ್ತು ಶಿಕ್ಷಣ,ವಸತಿ ಸೌಲಭ್ಯಕ್ಕೆ ಹೆಚ್ಟಿನ ಅನುದಾನ ಬಿಡುಗಡೆ ಮಾಡಬೇಕು ಮನವಿ ಮಾಡಿದರು.


ಈ ಸಂದರ್ಭದಲ್ಲಿ ಗೃಹ ಸಚಿವ ಡಾ .ಜಿ ಪರಮೇಶ್ವರ್,ಲೋಕಸಭಾ ಸದಸ್ಯ ಗೋವಿಂದ ಕಾರಜೋಳ ಮಾತನಾಡಿದರು. ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ಜನತೆಗೆ ತುಂಗಭದ್ರ ಯೋಜನೆಯಡಿ ಕುಡಿಯುವ ನೀರಿನ ಕಾಮಗಾರಿ ಉದ್ಘಾಟನೆ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ,ಗ್ರಾಮೀಣ ಅಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ,ಸಮಾಜಕಲ್ಯಾಣ ಇಲಾಖೆಯ ಸಚಿವ ಎಚ್ ಸಿ ಮಹದೇವಪ್ಪ,ಚಳ್ಳಕೆರೆ ಶಾಸಕ ರಘು ಮೂರ್ತಿ,ವಿಧಾನ ಪರಿಷತ್ ಸದಸ್ಯರಾದ ರಾಜೇಂದ್ರ ರಾಜಣ್ಣ,ಶ್ರೀನಿವಾಸ್,ಮಾಜಿ ಸಚಿವ ವೆಂಕಟರಮಣಪ್ಪ,ಪುರಸಭೆ ಅಧ್ಯಕ್ಷ ಸುದೇಶ್ ಬಾಬು ,ಹೆಚ್ ವಿ ಕುಮಾರ ಸ್ವಾಮಿ ,ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿ ಪಂ ಸಿ ಇ ಓ ಪ್ರಭು,ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ ವಿ ಅಶೋಕ ಹಾಜರಿದ್ದರು
About The Author
Discover more from JANADHWANI NEWS
Subscribe to get the latest posts sent to your email.