
ಚಳ್ಳಕೆರೆ ಏ.20
ಅವಘಡಕ್ಕೆ ಆಹ್ವಾನ ನೀಡುವಂತಿರುವ ಟವರ್ ಕಂಬ.
ಹೌದು ಇದು ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ರೆಡ್ಡಿ ಹಳ್ಳಿ ಗ್ರಾಮದ ದಲಿತ ಕಾಲೋನಿಯ
ಲಕ್ಷ್ಮಣ ಎಂಬುವರ ಮನೆ ಹತ್ತಿರ ಸುಮಾರು ವರ್ಷಗಳ ಹಿಂದೆ ವೈರ್ ಲೆಸ್ ಟಿಲಿಪೋನ್ ಅಳವಡಿಸಲು ಬಿಎಸ್ಎನ್ಎಲ್ ಮಿನಿ ಟವರ್ ಅಳವಡಿಸಲಾಗಿತ್ತು ಕೆಲವರ್ಷಗಳಿಂದ ಸ್ಥಗಿತವಾಗಿದ್ದು ಅದಕ್ಕೆ ವಾರಸುದಾರಿಲ್ಲದೆ ಅನಾಥವಾಗಿ ದ್ದು ಈಗ ಮಳೆ ಗಾಳಿಗೆ ಬುಡ ಸಮೇತ ಕಳಚಿ ಮನೆ ಮೇಲೆ ಹಾಗೂ ವಿದ್ಯುತ್ ತಂತಿ ಮೇಲೆ ಯಾವುದೇ ಸಂದರ್ಭದಲ್ಲಿ ಬೀಳುವ ಸಾಧ್ಯತೆ ಇದ್ದು ಇದರಿಂದ ಪ್ರಾಣ ಭೀತಿಯಲ್ಲಿ ಜೀವನ ಸಾಗಿಸುವಂತಾಗಿದ್ದು ಪ್ರಾಣಹಾನಿ ಸಂಭವಿಸುವ ಮುನ್ನವೇ ಸಂಬಂಧ ಪಟ್ಟ ಅಧಿಕಾರಿಗಳು ಬೀಳುವ ಸ್ಥಿತಿಯಲ್ಲಿರುವ ಟವರ್ ಕಂಬವನ್ನು ತೆರವುಗೊಳಿಸುವರೇ ಕಾದು ನೋಡಬೇಕಿದೆ..






About The Author
Discover more from JANADHWANI NEWS
Subscribe to get the latest posts sent to your email.