January 29, 2026
IMG-20260120-WA0335.jpg

ನಾಯಕನಹಟ್ಟಿ:
ನಾಯಕನಹಟ್ಟಿ ಸಮೀಪದ ಓಬಯ್ಯನಹಟ್ಟಿ ಗ್ರಾಮದಲ್ಲಿ ಸೋಮವಾರ ಶ್ರೀ ಬೋರದೇವರ ಸ್ವಾಮಿಯ ಜಾತ್ರಾ ಮಹೋತ್ಸವದ ಅಂಗವಾಗಿ ಗದ್ದಿಗೆ ಪೂಜೆ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಬಂಡೆ ಕಪ್ಪಿಲೆ ಓಬಣ್ಣ ಅವರು, ಚಿಕ್ಕ ಉಳ್ಳಾರ್ತಿಯಲ್ಲಿ ನಡೆಯುವ ಶ್ರೀ ಬೋರದೇವರ ಜಾತ್ರಾ ಮಹೋತ್ಸವವು ಪ್ರತಿ ಐದು ವರ್ಷಗಳಿಗೊಮ್ಮೆ ವಿಜೃಂಭಣೆಯಿಂದ ನಡೆಯುತ್ತಿದ್ದು, ಈ ಬಾರಿ ಫೆಬ್ರವರಿ 21ರಿಂದ 23ರವರೆಗೆ ಜರುಗಲಿದೆ ಎಂದು ತಿಳಿಸಿದರು. ಕುಲಸ್ಥರು ಹಾಗೂ ಗ್ರಾಮಸ್ಥರು ದನ-ಮನ ಸಮರ್ಪಿಸಿ ಎಲ್ಲರೂ ಒಂದಾಗಿ ಸೇರಿ ಜಾತ್ರೆಯನ್ನು ಅದ್ದೂರಿಯಾಗಿ ಹಾಗೂ ಯಶಸ್ವಿಯಾಗಿ ನಡೆಸಬೇಕೆಂದು ಅವರು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಡಿ.ಹೆಚ್. ಪರಮೇಶ್ವರಪ್ಪ ಮಾತನಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಓ. ಸೋಮಶೇಖರ, ಪಾಟೀಲ್ ಪಿ.ಎಂ. ಮಹದೇವಣ್ಣ, ಡಿ.ಟಿ. ಕಾಮರಾಜ, ಬೋರಜ್ಜಯ್ಯ, ಮ್ಯಾಕಲ ಮಲ್ಲಯ್ಯ, ಗೊಂಚಿ ಸಣ್ಣಬೋರಯ್ಯ, ಗಣೇಶ ಬೋರಯ್ಯ, ಮರಡಿ ಬೋರಯ್ಯ ಸೇರಿದಂತೆ ಗೊಂಚಿಗಾರು ಹಾಗೂ ಗೌಡ್ರು ವಂಶಸ್ಥರು ಮತ್ತು ಅನೇಕ ಕುಲಭಾಂದವರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading