ಹೊಸದುರ್ಗ:
ಪಟ್ಟಣದ ಗಣೇಶ ಸದನದಲ್ಲಿ ಜ.24ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.
ಚೇತನ ಆಸ್ಪತ್ರೆ, ಕಡೂರು; ನಾರಾಯಣ ಹೆಲ್ತ್, ಶಿವಮೊಗ್ಗ; ಗಣೇಶ ಸದನ ಟ್ರಸ್ಟ್, ಹೊಸದುರ್ಗ ಹಾಗೂ ಶಿರಡಿ ಸಾಯಿಬಾಬ ಮಂದಿರ ಟ್ರಸ್ಟ್, ಹೊಸದುರ್ಗ ಇವರ ಸಂಯುಕ್ತ ಆಶ್ರಯದಲ್ಲಿ ಈ ಶಿಬಿರ ಹಮ್ಮಿಕೊಳ್ಳಲಾಗಿದೆ.
ಶಿಬಿರದಲ್ಲಿ ಹೃದ್ರೋಗ, ಮಕ್ಕಳ ಸಂಬಂಧಿತ ಕಾಯಿಲೆಗಳು, ಗ್ಯಾಸ್ಟ್ರಿಕ್ ಸಮಸ್ಯೆ, ಕೀಲು ಹಾಗೂ ಮೂಳೆ ರೋಗ, ಮೆದುಳು–ನರರೋಗ, ಕಿಡ್ನಿ ಹಾಗೂ ಮೂತ್ರಪಿಂಡ ಸಮಸ್ಯೆ, ಪ್ರಸೂತಿ ಮತ್ತು ಸ್ತ್ರೀರೋಗ, ಕ್ಯಾನ್ಸರ್, ಮಧುಮೇಹ, ರಕ್ತದೊತ್ತಡ ಹಾಗೂ ಥೈರಾಯಿಡ್ ಸಮಸ್ಯೆಗಳ ಕುರಿತು ತಜ್ಞ ವೈದ್ಯರಿಂದ ತಪಾಸಣೆ ನಡೆಸಲಾಗುತ್ತದೆ.
ತಾಲೂಕಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಶಿರಡಿ ಸಾಯಿಬಾಬ ಟ್ರಸ್ಟ್ ಅಧ್ಯಕ್ಷ ಹಂಜಿ ಶಿವಸ್ವಾಮಿ ಮನವಿ ಮಾಡಿದ್ದಾರೆ.
About The Author
Discover more from JANADHWANI NEWS
Subscribe to get the latest posts sent to your email.