ಜೀವನಾಮೃತ
ಕೈಯಲ್ಲಿ ಹಸುಳೆಯ ಹಿಡಿದು
ನಯನದಿ ಗಂಗೆಯಾಗಿ ಹರಿಸಿ,
ದೈವವೇ ಗುರುವಾಗಿ ಆಶೀರ್ವದಿಸಿ
ಮಗದೊಮ್ಮೆ ಉಸಿರು ಹಸಿರಾಗಲು.
ಅಗಮ್ಯ ಅನಂತ ಅಗೋಚರ ವಿಭಕ್ತಿ,
ಮುಸುಕಿದ ಕಗ್ಗತ್ತಲಲ್ಲಿ ಹೊಂಬೆಳಕಿನ ಯುಕ್ತಿ,
ಕರುಣಿಸಿದ ದಿವ್ಯ ದರ್ಶನದ ಶಕ್ತಿ,
ಬಂಜರೆಂದವರ ಬಾಯಿಗೆ ಅದುವೇ ಮುಕ್ತಿ.
ಶೂನ್ಯ ಸಂಪಾದನೆಯನ್ನು ಅಕ್ಷಯವಾಗಿಸಿ,
ಸದಾಕಾಲವೂ ರಕ್ಷಾಕವಚವಾಗಿ ಮಾರ್ಗದರ್ಶಿಸಿ,
ಕಟುನುಡಿಗಳಿಗೆ ಪೂರ್ಣವಿರಾಮದ ಉತ್ತರಿಸಿ,
ಬಾಳ ಬೆಳಗಿಸಿದ ಎನ್ನ ಪಾಲಿನ ಪ್ರತ್ಯಕ್ಷ ದೈವ,
ಎನ್ನ ಮನದಲ್ಲಿಪ್ಪ ಆರಾಧ್ಯ ದೈವ…
– ರಂಜಿತ ಎಂ. ಸಿರಿಗೆರೆ
ಭೌತಶಾಸ್ತ್ರ ಉಪನ್ಯಾಸಕಿ
About The Author
Discover more from JANADHWANI NEWS
Subscribe to get the latest posts sent to your email.