ನಾಯಕನಹಟ್ಟಿ-: ಒಕ್ಕೂಟದ ಸರ್ವತೋಮುಖ ಅಭಿವೃದ್ಧಿಗೆ ಪ್ರತಿಯೊಬ್ಬ ಸದಸ್ಯರು ಸಹಕಾರ ನೀಡಿ ಎಂದು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಇಲಾಖೆಯ ವ್ಯವಸ್ಥಾಪಕ ಕೃಷಿಯೇತರ ತಿಪ್ಪೇಸ್ವಾಮಿ ಹೇಳಿದರು.




ಬುಧವಾರ ನಾಯಕನಹಟ್ಟಿ ಸಮೀಪದ ಅಬ್ಬೇನಹಳ್ಳಿ ಗ್ರಾಮದಲ್ಲಿ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಕರ್ನಾಟಕ ರಾಜ್ಯ ಜೀವನೋಪಾಯ ಅಭಿಯಾನ ಹಾಗೂ ಶ್ರೀ ಪ್ರಣತಿ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟ ಅಬ್ಬೇನಹಳ್ಳಿ ವತಿಯಿಂದ ಲಿಂಗತ್ವ ಆಧಾರಿತ ದೌರ್ಜನ್ಯ ವಿರುದ್ಧ ರಾಷ್ಟ್ರೀಯ ಅಭಿಯಾನ ಮತ್ತು ವಾರ್ಷಿಕ ಮಹಾಸಭೆ ಕಾರ್ಯಕ್ರಮದಲ್ಲಿ ಜೋತಿ ಬೆಳಗುವ ಮೂಲಕ ಉದ್ಘಾಟಿಸಿ ಚಾಲನೆ ನೀಡಿ ಮಾತನಾಡಿದರು. ಅಬ್ಬೇನಹಳ್ಳಿ ವ್ಯಾಪ್ತಿಯ ಒಕ್ಕೂಟಕ್ಕೆ ಸುಮಾರು ಐದರಿಂದ ಆರು ಹಳ್ಳಿಗಳಲ್ಲಿ ಸೊಸಾಯ ಸಂಘಗಳಿವೆ ಸಂಘದ ಸದಸ್ಯರು ಪಡೆದಿರುವ ಸಾಲದ ಮತ್ತು ವೈವಾಟಿಕ ವ್ಯವಹಾರ ನಡೆಸಿರುವ ಸಲುವಾಗಿ ವಾರ್ಷಿಕ ಮಹಾಸಭೆಯನ್ನು ನಡೆಸಲಾಗುತ್ತದೆ ಆದ್ದರಿಂದ ಪ್ರತಿಯೊಬ್ಬ ಸದಸ್ಯರು ಒಕ್ಕೂಟದ ಶ್ರೇಯಸಿಗೆ ಸಹಕಾರ ನೀಡುವಂತೆ ಸದಸ್ಯರಲ್ಲಿ ಮನವಿ ಮಾಡಿದರು
ಇನ್ನೂ ಕಾರ್ಯಕ್ರಮದಲ್ಲಿ ಮಾದಕ ಮುಕ್ತ ಕರ್ನಾಟಕ ಅಭಿಯಾನ ಕುರಿತು ಸದಸ್ಯರಿಗೆ ಪ್ರತಿಜ್ಞೆ ಮಾಡಿಸಲಾಯಿತು
ಕಾರ್ಯಕ್ರಮದಲ್ಲಿ ಪಂಚಾಯತ್ ರಾಜ್ ಇಲಾಖೆ ಎಸ್, ಶ್ವೇತ ತಾಲ್ಲೂಕು ಸಂಪನ್ಮೂಲ ವ್ಯಕ್ತಿ ಕವಿತ.
ಪ್ರಣತಿ ಒಕ್ಕೂಟದ ಸಿಬ್ಬಂದಿಗಳಾದ ಶೈಲಾಮ್ಮ, ಜಯಮ್ಮ ,ಚೈತ್ರ, ಕಾವೇರಿ,ಜಿ ಲಕ್ಷ್ಮಿ, ಎಂ.ಕಮಲಮ್ಮ ವಿವಿಧ ಹಳ್ಳಿಗಳ ಸಹಾಯ ಸಂಘದ ಸದಸ್ಯರು ಭಾಗವಹಿಸಿದರು.
About The Author
Discover more from JANADHWANI NEWS
Subscribe to get the latest posts sent to your email.