
ಚಳ್ಳಕೆರೆ ಅ.19
ಜನಧ್ವನಿ ಸುದ್ದಿ ಬಿತ್ತರಿಸಿದ ಕೆಲವೇ ಗಂಟೆಗಳಲ್ಲಿ ದುರಸ್ಥಿಗೆ ಮುಂದಾದ ಅಧಿಕಾರಿಗಳು ಇದು ಜನಧ್ವನಿ ನ್ಯೂಸ್ ಎಫೆಕ್ಟ್.
ಚಳ್ಳಕೆರೆ ತಾಲೂಕಿನ ಚಿಕ್ಕಮ್ಮನಹಳ್ಳಿ ಗ್ರಾಮದ. ಸುತ್ತ ಮುತ್ತ ಶುಕ್ರವಾರ ರಾತ್ರಿ ಸುರಿದ ಬಾರಿ ಮಳೆಯಿಂದಾಗಿ ಗ್ರಾಮದ ಮಧ್ಯೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡು ಸರ್ವೀಸ್ ರಸ್ತೆ ಪಕ್ಕ ನಿರ್ಮಿಸಿರುವ ಚರಂಡಿ ಕಾಮಗಾರಿ ತಡೆಗೋಡೆ ಕುಸಿದು ಬಿದ್ದಿದ್ದು ಇದು ಕಳಪೆ ಕಾಮಗಾರಿಯಿಂದ ಕುಸಿದಿದೆ ಎಂದು ಗ್ರಾಮಸ್ಥರು ಆರೋಪಿಸಿರುವ ಬಗ್ಗೆ ಜನಧ್ವನಿ ನ್ಯೂಸ್ ವರದಿ ಬಿತ್ತರಿಸಿತ್ತು ರಾಷ್ಟ್ರೀಯಾ ಹೆದ್ದಾರಿ ಪ್ರಾಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಕುಸಿದು ಬಿದ್ದ ತಡೆಗೋಡೆಯನ್ನು ದುರಸ್ಥಿಗೆ ಮುಂದಾಗಿದ್ದಾರೆ.
ಚಿಕ್ಕಮ್ಮನಹಳ್ಳಿ ಗ್ರಾಮಸ್ಥರು ಜನಧ್ವನಿ ನ್ಯೂಸ್ ಹಾಗೂ ಕಾಮಗಾರಿ ದುರಸ್ಥಿ ಪಡಿಸಿದ ಅಧಿಕಾರಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.











About The Author
Discover more from JANADHWANI NEWS
Subscribe to get the latest posts sent to your email.