January 30, 2026
IMG-20250919-WA0215.jpg

ವರದಿ: ಕೆ.ಟಿ.ಮೋಹನ್ ಕುಮಾರ್

ಸಾಲಿಗ್ರಾಮ (ಮೈಸೂರು ಜಿಲ್ಲೆ): ರಾಜ್ಯದಲ್ಲಿಯೇ ಹಾಲು ಉತ್ಪಾದಕರುಗಳಿಗೆ ನೀಡುವ ದರದಲ್ಲಿ ಮೈಸೂರು ಹಾಲು ಒಕ್ಕೂಟವು ಎರಡನೇ ಸ್ಥಾನದಲ್ಲಿದೆ ಎಂದು ಮೈಮುಲ್ ನಿರ್ದೇಶಕ ಎ.ಟಿ.ಸೋಮಶೇಖರ್ ಹೇಳಿದರು.

ಅವರು ತಾಲೂಕಿನ ಹರದನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಮೈಸೂರು ಹಾಲು ಒಕ್ಕೂಟಕ್ಕೆ ಪ್ರತಿನಿತ್ಯ ಒಂಭತ್ತುವರೆ ಲಕ್ಷ ಲೀಟರ್ ಹಾಲು ಬರುತ್ತಿದೆ. ಇದರಲ್ಲಿ ನಿತ್ಯ ನಾಲ್ಕುವರೆ ಲಕ್ಷ ಲೀಟರ್ ಹಾಲು ಮಾರಾಟವಾಗುತ್ತಿದ್ದು, 5 ಲಕ್ಷ ಲೀಟರ್ ಹಾಲು ಉಳಿಯುತ್ತಿದೆ. ಇದರಲ್ಲಿ ಪೌಡರ್ ಮಾಡಲಾಗುತ್ತಿದೆ. ಮೈಮುಲ್ ಸದಾ ರೈತರ ಪರವಾದ ಕೆಲಸವನ್ನು ಮಾಡುತ್ತಿದೆ ಎಂದರು.

ಹರದನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘವು ಉತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ ಪ್ರಸ್ತುತ ಸಾಲಿನಲ್ಲಿ ಎರಡು ಕೋಟಿ 56 ಲಕ್ಷ ರೂಗಳ ವ್ಯವಹಾರವನ್ನು ಮಾಡಿ 7,32,000 ರೂಗಳ ನಿವ್ವಳ ಲಾಭಗಳಿಸಿದೆ ಎಂದರು.

ಸಂಘದಲ್ಲಿ ಹಾಲು ಉತ್ಪಾದಕರುಗಳಿಗೆ ನಿಗದಿತ ಸಮಯದಲ್ಲಿ ಹಾಲಿನ ಹಣವನ್ನು ನೀಡಬೇಕು ಎಂದ ಅವರು ಸಂಘಕ್ಕೆ ಮೈಮುಲ್ ವತಿಯಿಂದ ಎಲ್ಲಾ ರೀತಿಯ ನೆರವು ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಸಂಘಕ್ಕೆ ಅತಿ ಹೆಚ್ಚು ಹಾಲು ಸರಬರಾಜು ಮಾಡಿದ ಹಾಲು ಉತ್ಪಾದಕರುಗಳಿಗೆ ಬಹುಮಾನಗಳನ್ನ ವಿತರಿಸಿ, ಹಾಲು ಉತ್ಪಾದಕರ ಪ್ರತಿಭಾವಂತ ಮಕ್ಕಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.

ಸಭೆಯಲ್ಲಿ ಗ್ರಾ.ಪಂ. ಮಾಜಿ ಅಧ್ಯಕ್ಷ ಪ್ರದೀಪ್, ವೈದ್ಯ ಡಾ.ಸುನಿಲ್ ಕುಮಾರ್, ಮಾರ್ಗ ವಿಸ್ತರಣಾಧಿಕಾರಿ ನೇಮಿನಾಥ ಮಾಕಾಣಿ, ಸಂಘದ ಅಧ್ಯಕ್ಷ ಹೆಚ್.ಜಿ.ತಮ್ಮಯ್ಯ, ಉಪಾಧ್ಯಕ್ಷ ಕೃಷ್ಣೇಗೌಡ, ನಿರ್ದೇಶಕರುಗಳಾದ ರವಿ, ನೀಲಮ್ಮಮಹದೇವ, ಮಂಜು, ಮಹೇಶ್, ಹೆಚ್.ಜೆ.ರವಿ, ಗೋಪಾಲಶೆಟ್ಟಿ, ರಾಮಶೆಟ್ಟಿ, ರಂಗಮ್ಮರಮೇಶ್, ಹೆಚ್.ಕೆ.ಮೂರ್ತಿ,
ಆನಂದನಾಯಕ, ಸಿಇಓ ಹೆಚ್.ಕೆ.ಗಣೇಶ್, ಸಿಬ್ಬಂದಿ
ಕೆ.ಚಂದ್ರಮೂರ್ತಿ, ಹಾಲಿನ ಡೇರಿಗಳ ತಾಲ್ಲೂಕು ನೌಕರರ ಸಂಘದ ಉಪಾಧ್ಯಕ್ಷ ಬೆಟ್ಟಹಳ್ಳಿ ದಿನೇಶ್, ಖಜಾಂಚಿ
ಎಲ್.ಎಂ.ಮಂಜುನಾಥ್ ಸೇರಿದಂತೆ ಹಲವರು ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading