September 14, 2025
IMG-20250819-WA0276.jpg

ಚಳ್ಳಕೆರೆ ಆ 19.ಜಿಲ್ಲೆಯ ಎರಡನೇ ಅತಿದೊಡ್ಡ ಜಾತ್ರೆ ಎಂದು ಖ್ಯಾತಿ ಪಡೆದಿರುವ ವ ಗೌರಸಮುದ್ರ ಮಾರಮ್ಮದೇವಿ ಜಾತ್ರೆ ಸ್ಥಳಕ್ಕೆ ಅಧಿಕಾರಿಗಳ ತಂಡದೊಂದಿಗೆ ತಹಶೀಲ್ದಾರ್ ರೇಹಾನ್ ಪಾಷ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಆಗಸ್ಟ್ 25 ರಿಂದ 26 ವರೆಗೆ ನಡೆಯಲಿರುವ ಜಾತ್ರೆಗೆ. ರಾಜ್ಯದ ವಿವಿಧ ಜಿಲ್ಲೆಗಳು ಮತ್ತು ನೆರೆಯ ಆಂಧ್ರಪ್ರದೇಶದಿಂದ ಲಕ್ಷಾಂತರ ಜನರು ಜಾತ್ರೆಗೆ ಬರುವ ಕಾರಣ ಪೂರ್ವಸಭೆಯಲ್ಲಿ ಸೂಚಿಸಿರುವ ಎಲ್ಲಾ ಸಿದ್ಧತೆಗಳನ್ನು ಚಾಚೂ ತಪ್ಪದೇ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಾತ್ರೆ ನಡೆಯುವ ಗ್ರಾಮ ಹಾಗೂ ತುಂಬಲಿನಲ್ಲಿ ಸ್ವಚ್ಛತೆಯನ್ನು ಮಾಡಬೇಕು. ಜಾತ್ರೆಗೆ ಬರುವ ಎಲ್ಲಾ ರಸ್ತೆ ಮಾರ್ಗಗಳ ದುರಸ್ಥಿ ಹಾಗೂ ರಸ್ತೆಗೆ ಚಾಚಿಕೊಂಡಿರುವ ಸೀಮೆ ಜಾಲಿ ತೆರವುಗೊಳಿಸ ಬೇಕು. ಕುಡಿಯುವ ನೀರು.ಬೀದಿ ದೀಪಗಳ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಓಬಣ್ಣ ಸದಸ್ಯರಾದ ಶಶಿಕುಮಾರ್. ಈರಣ್ಣ. ವೃತ್ತ ನಿರೀಕ್ಷಕ ಹ‌ನುಮಂತಪ್ಪ. ಎಇಇ ರಾಮಚಂದ್ರನಾಯಕ .ಕಂದಾಯ ನಿರೀಕ್ಷಕ ಲಿಂಗೇಗೌಡ. ಇತರರಿದ್ದರು. .

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading