
ವರದಿ:: ಕೆ.ಟಿ. ಓಬಳೇಶ್ ನಲಗೇತನಹಟ್ಟಿ.
ನಾಯಕನಹಟ್ಟಿ: ಗೌಡಗೆರೆ ಗ್ರಾಮ ಪಂಚಾಯತಿಯ ಗ್ರಾಮಗಳಲ್ಲಿ ಪ್ರತಿಯೊಬ್ಬರೂ ಸ್ವಚತೆಗೆ ಮೊದಲ ಆದ್ಯತೆ ನೀಡಬೇಕು ಎಂದು ಅಧ್ಯಕ್ಷ ಶಾಂತಮ್ಮ ಹೇಳಿದರು.
ಶನಿವಾರ ಹೋಬಳಿಯ ಗೌಡಗೆರೆ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಗ್ರಾಮ ಪಂಚಾಯತಿ ವತಿಯಿಂದ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು ಗೌಡಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಪ್ರತಿ ಹಳ್ಳಿಗಳಲ್ಲಿ ಮೂಲಭೂತ ಸೌಲಭ್ಯ ಹಾಗೂ ಸ್ವಚ್ಛತೆಗೆ ಅಧಿಕಾರಿಗಳು ಮತ್ತು ಸದಸ್ಯರು ಕೈ ಜೋಡಿಸಿ, ಸ್ವಚ್ಛತೆ ಇಲ್ಲದೇ ಹೋದರೆ ರೋಗಗಳು ಹೆಚ್ಚಾಗುತ್ತವೆ. ಇನ್ನೇನು ಮಳೆಗಾಲ ಪ್ರಾರಂಭವಾಗುತ್ತದೆ. ಆದ್ದರಿಂದ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿ ಎಂದು ಹೇಳಿದರು.



ಇದೇ ಸಂದರ್ಭದಲ್ಲಿ ಗೌಡಗೆರೆ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಎಂ. ಎಚ್. ಲಕ್ಷಣ, ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಟಿ ರಂಗಪ್ಪ, ಸದಸ್ಯರಾದ ತಿಪ್ಪೇಶ್ ಗಿಣಿಯರ್, ಜಿ ಓ ಓಬಳೇಶ್, ಕೆಂಗ ರುದ್ರಪ್ಪ, ಮಂಜಕ್ಕ, ಡಿಜಿ ಮಂಜಕ್ಕ, ಕೆ ಹೆಚ್ ಮಂಜುಳಾ, ಅನ್ನಪೂರ್ಣಮ್ಮ, ಸಿ.ನಾಗಣ್ಣ, ಪಿಡಿಒ ಈಶ್ವರ್, ಸಿಬ್ಬಂದಿಗಳಾದ ಕಾರ್ಯದರ್ಶಿ ಗಿರೀಶ್, ದಿಲ್ ಕಲೆಕ್ಟರ್ ವೀರೇಶ್, ಕಂಪ್ಯೂಟರ್ ಆಪರೇಟರ್ ಗುರುಸ್ವಾಮಿ, ಗ್ರಂಥಪಾಲಕ ಕರಿಬಸಪ್ಪ, ಎನ್ ಆರ್ ಈ ಜಿ ರಂಗಸ್ವಾಮಿ, ಇಂಜಿನಿಯರ್ ಮಹೇಶ್ ಇನ್ನೂ ಮುಂತಾದವರು ಹಾಜರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.