January 29, 2026
IMG-20250219-WA0242.jpg

ನಾಯಕನಹಟ್ಟಿ::ಫೆ. 19. ಕಲಿಕಾ ಹಬ್ಬ ಮಕ್ಕಳ ಉತ್ತಮ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ಎಸ್ ಸುರೇಶ್ ತಿಳಿಸಿದರು.

ಅವರು ಬುಧವಾರ ಹೋಬಳಿಯ ತೊರೆಕೋಲಮ್ಮನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ
ಶಾಲಾ ಶಿಕ್ಷಣ ಇಲಾಖೆ ಚಿತ್ರದುರ್ಗ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಚಳ್ಳಕೆರೆ ಸಮೂಹ ಸಂಪನ್ಮೂಲ ಕೇಂದ್ರ ಅಬ್ಬೇನಹಳ್ಳಿ ನಾಯಕನಹಟ್ಟಿ ಎಫೆ. ಎಲ್. ಎನ್. ಕಲಿಕಾ ಹಬ್ಬ 2025. ಕಾರ್ಯಕ್ರಮವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದರು ಕಲಿಕಾ ಹಬ್ಬ ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಶಿಕ್ಷಣದ ಜೊತೆಗೆ ಇನ್ನಿತರ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ನಿರಂತರವಾಗಿ ಕಲಿಯುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಲು ಕಲಿಕಾ ಹಬ್ಬ ಪ್ರಯೋಜನವಾಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಕೊಡಿರಹಳ್ಳಿ ಯುವ ಮುಖಂಡ ಆನಂದಪ್ಪ, ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ಸದಸ್ಯರಾದ ಸುಮಿತ್ರಮ್ಮ, ಮಾರಕ್ಕ, ಎಸ್ ಡಿ. ಎಂ.ಸಿ ಅಧ್ಯಕ್ಷ ಗುರುಸ್ವಾಮಿ,ಅಬ್ಬೇನಹಳ್ಳಿ ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ವಿಶ್ವನಾಥ್, ಪ್ರಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ಸದಾಶಿವಯ್ಯ, ಸಿ ಆರ್ ಪಿ ಪಾಲಯ್ಯ, ನಾಯಕನಹಟ್ಟಿ ಸಿಆರ್ ಪಿ ಆರ್. ಈಶ್ವರಪ್ಪ, ಮುಷ್ಟಲಗುಮ್ಮಿ ಮುಖ್ಯ ಶಿಕ್ಷಕ ಕೃಷಪ್ಪ, ಅಬ್ಬೇನಹಳ್ಳಿ ಆಂಜನೇಯ ಬಡಾವಣೆಯ ಮುಖ್ಯ ಶಿಕ್ಷಕ ತಿಪ್ಪೇಸ್ವಾಮಿ, ಅಂಜೀನಪ್ಪ, ‌ಮನುಮೈನಹಟ್ಟಿ ಶಶಿಧರ್,
ತೊರೆಕೋಳಮ್ಮನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎಂ. ಮಲ್ಲಿಕಾರ್ಜುನ, ಸೇರಿದಂತೆ ಅಬ್ಬೇನಹಳ್ಳಿ ಕ್ಲಸ್ಟರ್ ವಿವಿಧ ಶಾಲೆಗಳ ಶಿಕ್ಷಕರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಗ್ರಾಮಸ್ಥರು ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading