ಚಳ್ಳಕೆರೆ ಫೆ.19
ಪ್ರತಿ ಸಾರಿ ಬೇಸಿಗೆ ಬಂದಾಗ ಕುಡಿವ ನೀರಿಗೆ ಹಾಹಾಕಾರ ಸೃಷ್ಟಿಯಾಗಿ ಹಕ್ಕಿಪಕ್ಷಿಗಳು ತೊಂದರೆ ಎದುರಿಸುವುದು ಸಹಜವಾಗಿದೆ.
ಜನ ಬಾಯಾರಿದರೆ ಕುಡಿವ ನೀರು ಖರೀದಿಸಿ ನೀರಿನ ದಾಹ ನೀಗಿಸಿಕೊಳ್ಳುತ್ತಾರೆ. ಆದರೆ, ಮೂಕ ಪ್ರಾಣಿಗಳ ರೋಧನೆ ಹೇಳತೀರದು. ಈ ಸಮಸ್ಯೆ ಅರಿತ ಪ್ರಥಮ ದರ್ಜೆ ಗುತ್ತಿಗೆದಾರರೊಬ್ಬರು ಮೂಕ ಪ್ರಾಣಿಗಳಿಗೆ ನೀರು ಪೂರೈಸಿ ರಕ್ಷಿಸುವ ಕಾರ್ಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಹೌದು ಇದು ಚಳ್ಳಕೆರೆ ನಗರದ ತ್ಯಾಗರಾಜನಗರದ ಬಾಪೂಜಿ ಕಾಲೇಜು ಸಮೀಪವಿರುವ ಗುತ್ತಿದಾರ ಮಂಜುನಾಥ್ ಮನೆ ಬಳಿ ನೀರಿನ ತೊಟ್ಟಿಗಳನ್ನಿಟ್ಟು ನಿತ್ಯ ನೀರು ತುಂಬಿಸುವ ಕಾಯಾಕ ಮಾಡುತ್ತಿದ್ದಾರೆ.
ಬಾಯಾರಿದ ಜಾನುವಾರುಗಳು.ನಾಯಿಗಳ ಸೇರಿದಂತೆ ಪ್ರಾಣಿ ಪಕ್ಷಿ ಸಂಕುಲ ನೀರು ಕುಡಿದು ನೀರಿನ ದಾಹ ನೀಗಿಸಿಕೊಂಡು ಹೋಗುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಬೇಸಿಗೆ ಮುನ್ನವೇ ಬಿಸಿಲಿನ ತಾಪ ಹೆಚ್ಚಾಗಿದ್ದು ದಿನನಿತ್ಯ ನಗರಕ್ಕೆ ವಿದ್ಯಾರ್ಥಿಗಳು.ಕೂಲಿ ಕಾರ್ಮಿಕರುಬಸೇರಿದಂತೆ ನೂರಾರು ಜನರು ನಗರಕ್ಕೆ ಬರುತ್ತಿದ್ದು ಕುಡಿಯುವ ನೀರಿನ ದಾಹ ನೀಗಿಸಿಕೊಳ್ಳಲು ಕುಡಿಯುವ ನೀರಿಗಾಗಿವಪರದಾಡುವಂತಾಗಿದ್ದು ಇದೇ ರೀತಿ ಸಂಘ ಸ್ಥೆ ಸಂಸ್ಥೆಗಳು ಹಾಗೂ ನಗರಸಭೆ ಸೇರಿದಂತೆ ನಗರದ ವಿವಿಧ ಕಡೆ ಜನ ಜಾನುವಾರುಗಳ ನೀರಿನ ದಾಹ ನೀಗಿಸಲು ಅರವಟಿಕೆಗಳನ್ನು ಸ್ಥಾಪಿಸಿ ಜನಜಾನುವಾರುಗಳ ನೀರಿನ ದಾಹ ನೀಗಿಸಲು ಗುತ್ತಿಗೆದಾರ ಮಂಜುನಾಥ ಇವರ ಕಾರ್ಯದಂತೆ ಸ್ಥಾಪಿಸುವರೇ ಕಾದು ನೋಡ ಬೇಕಿದೆ.










About The Author
Discover more from JANADHWANI NEWS
Subscribe to get the latest posts sent to your email.