ನಾಯಕನಹಟ್ಟಿ: ಭಕ್ತ ಕನಕದಾಸರು ಒಂದು ಜಾತಿಗೆ ಸೀಮಿತವಲ್ಲ ಅವರು ಕೀರ್ತನೆಗಳ ಮೂಲಕ ಸಮಾಜದಲ್ಲಿನ ಮೇಲು-ಕೀಳನ್ನು ತೊರೆದು ಸರ್ವರಲ್ಲಿ ಆಧ್ಯಾತ್ಮಿಕ ಭಾವನಾತ್ಮಕ ನೆಮ್ಮದಿಗೆ ತಳಪಾಯ ಹಾಕಿದ ಮಾನವತವಾದಿ, ಅವರ ಆದರ್ಶಗಳನ್ನು ಎಲ್ಲರೂ ರೂಡಿಸಿಕೊಳ್ಳಬೇಕು ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಮಂಜುಳಾ ಶ್ರೀಕಾಂತ್ ಹೇಳಿದರು.
ಸೋಮವಾರ ಪಟ್ಟಣದ ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಭಕ್ತ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಕನಕದಾಸರ ಭಾವಚಿತ್ರಕ್ಕೆ ವಿಶೇಷ ಪೂಜೆ ಹಾಗೂ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು ಸಮಾಜದ ಏಳಿಗೆಯ ಕಾರ್ಯಗಳಿಗೆ ಜೀವನ ಮುಡುಪಿಟ್ಟು ಆಧ್ಯಾತ್ಮಿಕ ಸಾಮಾಜಿಕ ಭಾವನಾತ್ಮಕ ಅಸ್ಪೃಶ್ಯತೆಯನ್ನು ತೊಲಗಿಸುವ ನಿಟ್ಟಿನಲ್ಲಿ ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆ ಏನಾದರೂ ಬಲ್ಲಿರಾ ಎಂದು ಜನಸಾಮಾನ್ಯರಲ್ಲಿನ ಜಾತಿ ಧರ್ಮಗಳ ಮೇಲು ಕೀಲು ಭಾವನೆಗಳನ್ನು ತೊಲಗಿಸುವ ತ್ಯಾಗ ಜೀವನ ಮಾಡಿದ ಇಂತಹ ಮಹಾನ್ ಪುರುಷರ ತತ್ವ ಆದರ್ಶಗಳನ್ನು ಎಲ್ಲಾ ಜಾತಿ ಜನಾಂಗದ ಜನರು ಪಾಲಿಸುವುದು ಇಂದಿನ ಕಾಲಕ್ಕೆ ಅತ್ಯಗತ್ಯವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸದಸ್ಯರಾದ ಜೆ.ಆರ್. ರವಿಕುಮಾರ್, ಪಿ ಓಬಯ್ಯ ದಾಸ್, ಮುಖ್ಯಧಿಕಾರಿ ಓ. ಶ್ರೀನಿವಾಸ್, ಸಿಬ್ಬಂದಿಗಳಾದ ದ್ವಿತೀಯ ದರ್ಜೆ ಸಹಾಯಕರಾದ ಸುರೇಶ್, ಟಿ ತಿಪ್ಪೇಸ್ವಾಮಿ, ಮತ್ತು ಅಭಿಷೇಕ್, ಕಿರಿಯ ಆರೋಗ್ಯ ನಿರೀಕ್ಷ ತಿಪ್ಪೇಶ್, ಗುಡ್ಡದಯ್ಯ, ಲತಾ, ಮಂಗಳಮ್ಮ ರೇಣುಕಾಮ್ಮ, ಅಮ್ರಿನ್ ತಾಜ್, ಸೇರಿದಂತೆ ಪೌರಕಾರ್ಮಿಕರು ಹಾಜರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.