
ವರದಿ: ಕೆ.ಟಿ.ಮೋಹನ್ ಕುಮಾರ್
ಸಾಲಿಗ್ರಾಮ (ಮೈಸೂರು ಜಿಲ್ಲೆ): ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಮೈಸೂರು ಜಿಲ್ಲಾ ಶಾಖೆಗೆ ನ್ಯಾಯಾಂಗ ಇಲಾಖೆಯ ವತಿಯಿಂದ ನೂತನ ನಿರ್ದೇಶಕರಾಗಿ ಸಾಲಿಗ್ರಾಮ ತಾಲೂಕಿನ ಮೂಡಲಬೀಡು ಗ್ರಾಮದ ಎಂ.ಆರ್.ಕಿರಣ್ ಕುಮಾರ್ ಅತಿ ಹೆಚ್ಚಿನ ಮತಗಳಿಂದ ಚುನಾಯಿತರಾಗಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಗೆ ನ್ಯಾಯಾಂಗ ಇಲಾಖೆಯಿಂದ ನಿರ್ದೇಶಕರಾಗಿ ಆಯ್ಕೆಯಾಗಿರುವ ಸಾಲಿಗ್ರಾಮ ತಾಲೂಕಿನ ಮೊದಲ ಯುವ ಪ್ರತಿಭೆ ಎಂಬ ಕೀರ್ತಿಗೆ ಕಿರಣ್ ಕುಮಾರ್ ಪಾತ್ರರಾಗಿದ್ದಾರೆ.



ಇವರು ಸಾಲಿಗ್ರಾಮ ತಾಲೂಕಿನ ಮೂಡಲಬೀಡು ಗ್ರಾಮದ ಕೃಷಿಕರಾದ ರಘು ಮತ್ತು ಸುಜಾತ ರವರ ಸುಪುತ್ರರಾಗಿದ್ದು ಮೈಸೂರು ಜಿಲ್ಲಾ ನ್ಯಾಯಾಲಯದಲ್ಲಿ ಆದೇಶ ಜಾರಿಕಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಮೂಡಲಬೀಡು ಗ್ರಾಮದಲ್ಲಿ ಎಂ.ಆರ್.ಕಿರಣ್ ಕುಮಾರ್ ಅವರನ್ನು ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಕೆ.ರಘು, ಜಿ.ಎನ್.ಸುಜಾತ, ಗ್ರಾ.ಪಂ. ಸದಸ್ಯ ರಾಂಪುರ ಲೋಕೇಶ್, ಅನಿಲ್, ಲಕ್ಷ್ಮಣ, ಮುರಳಿ, ಮಹದೇವ್, ಪ್ರಭಾಕರ್, ನಾಗಭೂಷಣ್, ಪುಟ್ಟರಾಜು, ಶಶಿಧರ್, ವಿಜಯ್, ವಿಶ್ವನಾಥ್, ಮಹೇಶ್ ಸೇರಿದಂತೆ ಹಲವರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.