
ನಾಯಕನಹಟ್ಟಿ:: ಅ.17. ರಾಮಾಯಣ ಆದರ್ಶ ತೋರಿಸಿದರೆ ಮಹಾಭಾರತ ಧರ್ಮದ ಸಂಕೇತ ತೋರಿಸುತ್ತದೆ ಎಂದು ಗ್ರಾ.ಪಂ. ಸದಸ್ಯ ಮಾಜಿ ಅಧ್ಯಕ್ಷ ಪಿ.ಎನ್. ಮುತ್ತಯ್ಯ ತಿಳಿಸಿದರು.
ಹೋಬಳಿಯ ನಲಗೇತನಹಟ್ಟಿ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಶ್ರೀ ಮಹಾಋಷಿ ವಾಲ್ಮೀಕಿ ಭಾವಚಿತ್ರಕ್ಕೆ ಹೂ ಮಾಲೆ ಹಾಕಿ ವಿಶೇಷ ಪೂಜೆ ಸಲ್ಲಿಸಿ ನಂತರ ಮಾತನಾಡಿದ ಅವರು ಮಹಾಋಷಿ ವಾಲ್ಮೀಕಿ ರಚಿಸಿದ ರಾಮಾಯಣ ದೇಶದ ಅತಿ ದೊಡ್ಡ ಮಹಾಕಾವ್ಯವಾಗಿದೆ. ಈ ಮಹಾ ಕಾವ್ಯದಲ್ಲಿ ಭಾರತ ದೇಶದ ಜೀವನ ಚರಿತ್ರೆ ಸಂಸ್ಕೃತಿ ಅಡಗಿದೆ ವಾಲ್ಮೀಕಿ ಅವರು ತಪಸ್ಸಿನ ಶಕ್ತಿಯಿಂದ ಮಹಾಕಾವ್ಯ ರಚಿಸಿದ್ದಾರೆ ರಾಮಾಯಣ ಪ್ರಪಂಚದಲ್ಲಿಯೇ ಶ್ರೇಷ್ಠ ಕಾವ್ಯ ಆಗಿದೆ ಆದ್ದರಿಂದ ವಾಲ್ಮೀಕಿ ಸಮಾಜದವರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು, ಶಿಕ್ಷಣದ ಮೂಲಕ ಸಮಾಜವು ಮುಖ್ಯ ವಾಹಿನಿಗೆ ಬರಲು ಸಾಧ್ಯವಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಈಗಲೂ ಬೋರಯ್ಯ, ಸದಸ್ಯರಾದ ಪಿ.ಎಂ. ಮುತ್ತಯ್ಯ ,ಎಂ.ಬಿ. ಬೊಮ್ಮಲಿಂಗಯ್ಯ, ಗೌಡ್ರು ಬೋರಯ್ಯ, ಗ್ರಾಮಸ್ಥರಾದ ನಿಂಗರಾಜ್, ಎಂ.ಬಿ. ಸಣ್ಣ ಬೋರಯ್ಯ, ಪಿಡಿಒ ರಾಜಣ್ಣ, ಕಾರ್ಯದರ್ಶಿ ಕೆಂಚಪ್ಪ, ಕಾಯಕ ಮಿತ್ರ ಶೈಲಜಾ ,ಸೇರಿದಂತೆ ಗ್ರಾಮಸ್ಥರು ಇದ್ದರು
About The Author
Discover more from JANADHWANI NEWS
Subscribe to get the latest posts sent to your email.