
ವರದಿ: ಕೆ ಟಿ. ಓಬಳೇಶ್ ನಲಗೇತನಹಟ್ಟಿ.
ನಾಯಕನಹಟ್ಟಿ:: ನಾಯಕನಹಟ್ಟಿ ಇತಿಹಾಸ ಪ್ರಸಿದ್ಧ ತಿಪ್ಪೇರುದ್ರಸ್ವಾಮಿ ಮಠಕ್ಕೆ ಚಿತ್ರದುರ್ಗ ಜಿಲ್ಲಾ ಉಸ್ತುವಾರು ಸಚಿವ ಡಿ. ಸುಧಾಕರ್ ಭೇಟಿ ನೀಡಿದ್ರು.




ಹೊರಮಠ ಮಠ ಹಾಗೂ ಒಳ ಮಠಕ್ಕೆ ಭೇಟಿ ನೀಡಿದ ಯೋಜನೆ ಹಾಗೂ ಸಾಂಖ್ಯಿಕ ಸಚಿವ, ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಡಿ ಸುಧಾಕರ್ ಶ್ರಾವಣ ಮಾಸದ ಪ್ರಯುಕ್ತ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದರ್ಶನ ಪೆಡೆದು, ವಿಶೇಷ ಪೂಜೆ ಸಲ್ಲಿಸಿದ್ರು. ಮಳೆ ಬೆಳೆ ಸಮೃದ್ಧವಾಗಿ ಜನರ ಬದುಕು ಹಸನಾಗಲಿ ಅಂತಾ ಪ್ರಾರ್ಥಿಸಿದ್ರು.
ಈ ಸಂದರ್ಭದಲ್ಲಿ ಮುಖಂಡ ಪಟೇಲ್ ಜಿ.ಎಂ.ತಿಪ್ಪೇಸ್ವಾಮಿ, ಎತ್ತನಹಟ್ಟಿ ಗೌಡ್ರು, ಶಂಕರ್ ನಿಡಗಲ್, ನಾಯಕನಹಟ್ಟಿ ಸುನಿಲ್ ಜಯಲಕ್ಷ್ಮಿ, ಬಿಜಿಕೆರೆ ಕಾಂಗ್ರೆಸ್ ಮುಖಂಡ ನಾಗೇಶ್, ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಸಿಬ್ಬಂದಿ ಎಸ್ ಸತೀಶ್, ಮನು, ಶ್ರೀ ಕೃಷ್ಣ ದತ್ತ ಸಾಯಿ ಸೇವಾ ಸಮಿತಿ ಶ್ರೀಶೈಲ ಪಟೇಲ್ ಬಸವನಗೌಡ, ರೋಹಿಣಿ ಪಾಟೇಲ್, ಶಿಲ್ಪಾ ಪ್ರಕಾಶ್, ರಾಧಾ, ನಾಯಕನಹಟ್ಟಿ ಪೊಲೀಸ್ ಠಾಣೆಯ ಪಿಎಸ್ಐ ಪಾಂಡುರಂಗಪ್ಪ ಹಾಗೂ ಸಿಬ್ಬಂದಿಗಳು ಸೇರಿದಂತೆ ಉಪಸ್ಥಿತರಿದ್ರು.
About The Author
Discover more from JANADHWANI NEWS
Subscribe to get the latest posts sent to your email.