
ಹೊ ಳಲ್ಕೆರೆ ತಾಲೂಕಿನ ಚಿತ್ರಹಳ್ಳಿ ಶಿವಗಂಗಾ
ಮದ್ಯದ ಪೆಟ್ರೋಲ್ ಬಂಕ್ ಸಮೀಪ
ಶುಕ್ರವಾರ ರಾತ್ರಿ ನಡೆದಿರುವ ಭೀಕರ ಅಪಘಾತದಲ್ಲಿ
ಒಂದೇ ಕುಟುಂಬದ ಇಬ್ಬರು ಮಕ್ಕಳು ಸೇರಿ ನಾಲ್ವರು
ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ.
ಹೊಳಲ್ಕೆರೆ ತಾಲೂಕಿನ ಉದ್ಯಮಿ ಹರೇನಹಳ್ಳಿ
ತಿಪ್ಪೇಸ್ವಾಮಿ ಇವರ ಪತ್ನಿ ಗಂಗಮ್ಮ ಪುತ್ರ ಯಶವಂತ
ಅವರ ಪತ್ನಿ ಕಾವ್ಯ, ಇಬ್ಬರೂ ಮೊಮ್ಮಕ್ಕಳು ಸ್ಥಳದಲ್ಲೇ
ಸಾವನ್ನಪ್ಪಿದ್ದಾರೆ.
ಯಶವಂತ ಅವರು ತೀವ್ರವಾಗಿ ಗಾಯಗೊಂಡು
ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಿತ್ರದುರ್ಗ
ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಿತ್ರಳ್ಳಿ ಕಡೆಯಿಂದ ಹೊಳಲ್ಕೆರೆಗೆ ಬರುತ್ತಿದ್ದ ಟ್ರ್ಯಾಕ್ಟ
ಹಾಗೂ ಚಿತ್ರದುರ್ಗದಿಂದ ಬರುತ್ತಿದ್ದ ಹೊಳಲ್ಕೆರೆಗೆ
ಬರುತ್ತಿದ್ದ ಕಾರ್ ನಡುವೆ ಅಪಘಾತ ಸಂಭವಿಸಿದೆ.ಚಿತ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








About The Author
Discover more from JANADHWANI NEWS
Subscribe to get the latest posts sent to your email.