December 14, 2025
IMG-20251016-WA0163.jpg

ವರದಿ : ಶಿವಮೂರ್ತಿ ಬಿ
ನಾಯಕನಹಟ್ಟಿ ಪಟ್ಟಣದಲ್ಲಿ ಗುರುವಾರ ದಿನದಂದೂ ವಾಲ್ಮೀಕಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದ ನಂತರ ಮೊಳಕಾಲ್ಕೂರು ವಿಧಾನಸಭಾ ಕ್ಷೇತ್ರ ಶಾಸಕ ಎನ್.ವೈ.ಗೋಪಾಲಕೃಷ್ಣನವರ ಅಧ್ಯಕ್ಷತೆಯಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟನೆ, ಖಾಸಗಿ ಬಸ್ ನಿಲ್ದಾಣದ ಕಟ್ಟಡದ ಕಾಮಗಾರಿ ಹಾಗೂ ಮಳಿಗೆಗಳ ನಿರ್ಮಾಣದ ಭೂಮಿಪೂಜೆ, ಪಟ್ಟಣದ ಪಂಚಾಯಿತಿ ಕಛೇರಿ ಮೇಲ್ಬಾಗದ ಕಟ್ಟಡ ನಿರ್ಮಾಣದ ಭೂಮಿ ಪೂಜೆ ಹಾಗೂ ಪಟ್ಟಣ ಪಂಚಾಯಿತಿ ಕಛೇರಿಯಲ್ಲಿನ ವಾಹನಗಳ ಚಾಲನೆ ನೀಡಿದರು.ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆ ವತಿಯಿಂದ ಖಾಸಗಿ ಬಸ್ ನಿಲ್ದಾಣದ ಬದಲು ಸರ್ಕಾರಿ ಬಸ್ಸು ನಿಲ್ದಾಣ ನಿರ್ಮಾಣ ಮಾಡಲು ಮಾನ್ಯ ಶಾಸಕರಲ್ಲಿ ಮನವಿ ಮಾಡಿದರು, ನಮಗೆ ಖಾಸಗಿ ಬಸ್ಸು ನಿಲ್ದಾಣ ಬೇಡ ಸರ್ಕಾರಿ ಬಸ್ಸು ನಿಲ್ದಾಣ ಬೇಕು ಎಂದು ಕರವೇ ಕನ್ನಡ ಸೇನೆ ಹೋಬಳಿ ಅಧ್ಯಕ್ಷ ಜೋಗಿಹಟ್ಟಿ ಮಂಜಣ್ಣ ಶಾಸಕರಲ್ಲಿ ಮನವಿ ಮಾಡಿದರು.
ನಾಯಕನಹಟ್ಟಿ ಪಟ್ಟಣಕ್ಕೆ ಸರ್ಕಾರಿ ಬಸ್ಸು ನಿಲ್ದಾಣಗೆ ಅನುಮತಿ ಕೊಟ್ಟಿಲ್ಲ ಖಾಸಗಿ ಬಸ್ಸುಗೆ ಬಸ್ಸು ನಿಲ್ದಾಣಕ್ಕೆ ಅನುಮತಿ ಸಿಕ್ಕಿದೆ ಈ ವಿಚಾರವನ್ನು ಸಾರಿಗೆ ಸಚಿವರಿಗೆ ಹಾಗೂ ಮೇಲಾಧಿಕಾರಿಗಳ ಗಮನಕ್ಕೆ ತರುತ್ತನೆ ಎಂದು ಶಾಸಕ ಎನ್‌ ವೈ ಗೋಪಾಲಕೃಷ್ಣನವರು ತಿಳಿಸಿದರು.
ಈ ಸಂಧರ್ಭದಲ್ಲಿ ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಮಂಜುಳ ಶ್ರೀಕಾಂತ್‌, ಉಪಾಧ್ಯಕ್ಷೆ ಬೋಸಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ಅನ್ವರ್‌, ಮುಖ್ಯಾಧಿಕಾರಿ ಶ್ರೀನಿವಾಸ, ಪಟ್ಟಣ ಪಂಚಾಯ್ತಿ ಸರ್ವ ಸದಸ್ಯರು, ಜಿ ಎಂ ತಿಪ್ಪೆಸ್ವಾಮಿ ಎತ್ತಿನಹಟ್ಟಿ ಗೌಡ್ರು, ಮುಖಂಡರಾದ ಪ್ರಭುಸ್ವಾಮಿ, ಬಂಡೆ ಕಪ್ಪಿಲೆ ಓಬಣ್ಣ, ಬಸಪ್ಪ ನಾಯಕ, ನಾಗೇಶ ರೆಡ್ಡಿ, ವಕೀಲ ಉಮಾಪತಿ ಪೋಲೀಸ್‌ ಪಿಎಸ್‌ಐ ಪಾಂಡುರಂಗಪ್ಪ, ಬೆಸ್ಕಾಂ ಶಾಖಾಧಿಕಾರಿ ಬೋರಣ್ಣ ಉಪಸ್ಥಿತರು ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading