
ಚಳ್ಳಕೆರೆ ಅ.16
ಶಿಮುಲ್ ಶಿವಮೊಗ್ಗ ಹಾಲು ಒಕ್ಕೂಟದ ಕಲ್ಯಾಣ ಟ್ರಸ್ಟ್ ಇಂದ ಪರಿಹಾರ,
ವಿತರಣೆ, ಶಿವಮೊಗ್ಗ, ಹಾಲು ಒಕ್ಕೂಟದ ನಿರ್ದೇಶಕರಾದ ಬಿ,ಸಿ, ಸಂಜೀವ
ಮೂರ್ತಿ ರವರು ಚಳ್ಳಕೆರೆ ತಾಲೂಕಿನ ಬಾಲೇನಹಳ್ಳಿ ಮತ್ತು ನರಹರಿ
ನಗರ ಸಂಘಗಳ ಹಾಲು ಉತ್ಪಾದಕರ ಅವಲಂಬಿತರಿಗೆ ಒಕ್ಕೂಟದ
ಕಲ್ಯಾಣ ಟ್ರಸ್ಟ್ ವತಿಯಿಂದ ಹಾಲು ಉತ್ಪಾದಕ ಸಂಘದ ಸದಸ್ಯರು
ಅನಾರೋಗ್ಯದಿಂದ ಮರಣ ಹೊಂದಿದ ಪರಿಹಾರ ಮೊತ್ತ ಒಂದು ಲಕ್ಷ
ರೂಪಾಯಿಗಳು ಚೆಕ್ಕುಗಳನ್ನು ಇಂದು ನರಹರಿನಗರ ಸಂಘದ
ಕಚೇರಿಯಲ್ಲಿ ವಿತರಿಸಿದ ಬಿಸಿ, ಸಂಜೀವ ಮೂರ್ತಿಯವರು ಇದೇ
ಸಂದರ್ಭದಲ್ಲಿ ಹಾಲು ಉತ್ಪಾದಕರ ಸಂಘದ ಸದಸ್ಯರಿಗೆ ಒಕ್ಕೂಟದ
ಕಲ್ಯಾಣ ಟ್ರಸ್ಟ್ ನಿಂದ ಒಳ್ಳೆಯ ಪುಯೋಜನ ಪಡೆದಂತಾಗುತ್ತದೆ ಮತ್ತು
ಈ ಮೊತ್ತವನ್ನು ರಾಸುಗಳನ್ನು ಕೊಳ್ಳುವಿಕೆಗೆ ಬಳಸಿಕೊಂಡು ಇನ್ನು
ಹೆಚ್ಚಿನ ಪ್ರಯೋಜನ ಪಡೆಯಬಹುದಾಗಿದೆ ಎಂದು ತಿಳಿಸಿದರು ಇದೇ
ಸಂದರ್ಭದಲ್ಲಿ ಮಾರ್ಗ ವಿಸ್ತರಣಾಧಿಕಾರಿ ನಯಾಜ್ ಬೇಗ್ ಮತ್ತು
ಬಾಲೇನಹಳ್ಳಿ, ಹಾಲು ಉತ್ಪಾದಕರ ಕಾರ್ಯದರ್ಶಿ ರಾಜಣ್ಣ ಮತ್ತು
ಸದಸ್ಯರು ಹಾಗೂ ನರಹರಿ ನಗರದ ಹಾಲು ಉತ್ಪಾದಕರ ಮುಖ್ಯ
ಕಾರ್ಯನಿರ್ವಾಹಕ ಎಚ್, ಜಯಣ್ಣ ಹಾಗೂ ಸದಸ್ಯರಾದ ಶಿವಣ್ಣ
ವೀರಣ್ಣ ವಿಶ್ವನಾಥ.ಜಿ ಬಸವರಾಜ ಟಿ.ಕುಮಾರಸ್ವಾಮಿ ಸಿಬ್ಬಂದಿ ವರ್ಗ
ಉಪಸ್ಥಿತರಿದ್ದರು


About The Author
Discover more from JANADHWANI NEWS
Subscribe to get the latest posts sent to your email.