March 17, 2026
1747412967250.jpg


ಚಿತ್ರದುರ್ಗಮೇ.16:
ಹಿರಿಯೂರು ತಹಶೀಲ್ದಾರರ ಕಚೇರಿ ದ್ವಿತೀಯ ದರ್ಜೆ ಸಹಾಯಕ ಶ್ರೀನಿವಾಸ ರೆಡ್ಡಿ ಅವರ ತಾಯಿ ಟಿ.ಗಂಗಮ್ಮ (75) ಶುಕ್ರವಾರ ಅಕಾಲಿಕ ಮರಣ ಹೊಂದಿದ್ದು, ಕುಟುಂಬಸ್ಥರ ಸ್ವ ಇಚ್ಛೆಯಂತೆ ಅವರ ಎರಡು ಕಣ್ಣುಗಳನ್ನು ದಾನ ಮಾಡಲಾಗಿದೆ.
ಕುಟುಂಬಸ್ಥರ ಸ್ವ ಇಚ್ಛೆಯಂತೆ ಅವರ ಎರಡು ಕಣ್ಣುಗಳನ್ನು ದಾನ ಮಾಡಲು ನಿರ್ಧರಿಸಿ ಶ್ರೀ ಬಸವ ಜ್ಯೋತಿ ಐ ಬ್ಯಾಂಕ್‍ಗೆ ಸಂಪರ್ಕ ಸಾಧಿಸಿ ಡಾ. ವೆನಿಲ್ಲಾ ಅವರ ಸಹಯೋಗದೊಂದಿಗೆ ದಿವಂಗತರ ಕಣ್ಣುಗಳು ಅಂಧರ ಬಾಳಿಗೆ ಬೆಳಕು ನೀಡುವಂತಹ ಮಹತ್ತರ ಕಾರ್ಯ ಮಾಡಿರುವುದು ಶ್ಲಾಘನೀಯ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಹಿರಿಯೂರು ಶಾಖೆಯ ಅಧ್ಯಕ್ಷ ಆರ್.ರಮೇಶ್ ಮೆಚ್ಚುಗೆ ವ್ಯಕ್ತಪಡಿಸಿ, ದಿವಂಗತರ ಕುಟುಂಬದವರಿಗೆ ಸಾಂತ್ವನ ನೀಡುವ ಮೂಲಕ ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಹಿರಿಯೂರು ತಹಶೀಲ್ದಾರ್ ರಾಜೇಶ್ ಕುಮಾರ್ ಕುಟುಂಬಸ್ಥರಿಗೆ ಪ್ರಶಂಸಾ ಪತ್ರ ವಿತರಿಸಿದರು. ಹಿರಿಯೂರು ಶಾಖೆಯ ಗೌರವಾಧ್ಯಕ್ಷ ತಿಪ್ಪೇಸ್ವಾಮಿ, ಐ ಬ್ಯಾಂಕ್ ನಿರ್ದೇಶಕರಾದ ವೀರೇಶ್, ವೆಂಕಟಸ್ವಾಮಿ ಹಾಗೂ ದಿವಂಗತರ ಸುಪುತ್ರರಾದ ಶ್ರೀನಿವಾಸ ರೆಡ್ಡಿ ಅವರು ತಮ್ಮ ತಾಯಿಯ ಆಗಲಿಕೆಯ ನೋವಿನಲ್ಲೂ ಸಹ ಈ ಮಹತ್ಕಾರ್ಯದಲ್ಲಿ ಭಾಗಿಯಾಗಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading