ಚಳ್ಳಕೆರೆ ಜ.16
ಬಡತನ ರೇಖೆಗಿಂತ ಕೆಳಗಿನ ಕುಟುಂಬ ಸದಸ್ಯರ ಅಂತ್ಯ ಸಂಸ್ಕಾರಕ್ಕೆ ಗ್ರಾಮಪಂಚಾಯಿತಿ ವತಿಯಿಂದ ಆರ್ಥಿಕ ಸಹಾಯಧನ ನೀಡಿ ಮಾನವೀಯತೆ ಮೆರೆದಿದೆ.
ಹೌದು ಇದು ಚಳ್ಳಕೆರೆ ತಾಲೂಕಿನ ಗೌರಸಮುದ್ರ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಗೌರಸಮುದ್ರ ಗ್ರಾಮದಲ್ಲಿ ಇಂದು ಪರಿಶಿಷ್ಟ ಪಂಗಡ ನಾಯಕ ಜನಾಂಗಕ್ಕೆ ಸೇರಿದ ಈರಮ್ಮ ಮೃತಪಟ್ಟಿದ್ದು.
ಸುದ್ದಿ ತಿಳಿದ ಗೌರಸಮುದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ. ಓಬಣ್ಣ ಕೂಡಲೇ ಸರ್ವ ಸದಸ್ಯರ ಗಮನಸೆಳೆದು ಮೃತ ಕುಂಟುಂಬಸ್ಥೆಯ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಗ್ರಾಪಂ ಅನುದಾನದಲ್ಲಿ 5 ಸಾವಿರೂ ಚೆಕ್ ನೀಡುವ ಮೂಲಕ ಅಂತ್ಯ ಸಂಸ್ಕಾರಕ್ಕೆ ನೆರವು ನೀಡಿದ್ದಾರೆ.
ಗ್ರಾಪಂ ಅಧ್ಯಕ್ಷ ಓಬಣ್ಣ ಮಾತನಾಡಿ ಗೌರಸಮುದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಮರಣ ಹೊಂದಿದ್ದಲ್ಲಿ ಗ್ರಾಮ ಪಂಚಾಯಿತಿಯಿಂದ 5 ಸಾವಿರ ರೂ ಗಳನ್ನು ಮೃತರ ಕುಟುಂಬಕ್ಕೆ ಆರ್ಥಿಕ ಸಹಾಯಧನ ನೀಡಲಾಗುವುದು ಈ ಯೋಜನೆಯನ್ನು ಬಡಕುಟುಂಬಸ್ಥರು ಸದುಪಯೋಗ ಪಡಿದಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ. ಸದಸ್ಯರಾದ ಜಿಎಂ ಈ ಸಂದರ್ಭದಲ್ಲಿ ಸದಸ್ಯರಾದ ಈರಣ್ಣ .ಸುಭಾಷಿಣಿ .ಭಾಗ್ಯಮ್ಮ. ಶಶಿಕುಮಾರ್. ನಾಗವೇಣಿ ಮಶಶಿರೇಖಾ .ಕರ ವಸೂಲಿಗಾರ ಪ್ರಕಾಶ್ ಹಾಗೂ ಇತರರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.