September 15, 2025
IMG-20250915-WA0251.jpg

ವರದಿ: ಕೆ.ಟಿ. ಓಬಳೇಶ್ ನಲಗೇತನಹಟ್ಟಿ.

ನಾಯಕನಹಟ್ಟಿ:: ರಾಜ್ಯದಲ್ಲಿ ಅತಿ ಹೆಚ್ಚು ನಾಯಕ ಸಮುದಾಯ ಇರುವ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ಎಂದು ದ್ರಾಕ್ಷಿ ಮತ್ತು ವೈನ್ ಬೋರ್ಡ್ ಅಧ್ಯಕ್ಷ ಡಾ. ಬಿ ಯೋಗೇಶ್ ಬಾಬು ಹೇಳಿದರು.

ಸೋಮವಾರ ಪಟ್ಟಣದ ವಾಲ್ಮೀಕಿ ವೃತ್ತಕ್ಕೆ ಭೇಟಿ ನೀಡಿ ಆದಿ ಕವಿ ಮಹಾಋಷಿ ವಾಲ್ಮೀಕಿ ಪುತ್ತಳಿಯ ಕಾಮಗಾರಿಯನ್ನು ವೀಕ್ಷಣೆ ಮಾಡಿ ಮಾತನಾಡಿದ ಅವರು ನಾಯಕನಹಟ್ಟಿ ಹೋಬಳಿಯ ನಮ್ಮ ನಾಯಕ ಸಮುದಾಯದ ಹಿರಿಯ ಮುಖಂಡರ ನೇತೃತ್ವದಲ್ಲಿ ಇಂತಹ ಪುಣ್ಯಕ್ಷೇತ್ರದಲ್ಲಿ ವಾಲ್ಮೀಕಿ ಪುತ್ತಳಿಯ ಸ್ಥಾಪನೆ ಮಾಡುವುದು ಸಂತೋಷದ ವಿಷಯ ಐತಿಹಾಸಿಕ ಶ್ರೀ ಗುರು ಶ್ರೀ ಗುರು ತಿಪ್ಪೇರುದ್ರಸ್ವಾಮಿ ಪುಣ್ಯಕ್ಷೇತ್ರದಲ್ಲಿ ಆದಿ ಕವಿ ಮಹರ್ಷಿ ವಾಲ್ಮೀಕಿ ಪುತ್ತಳಿ ಸ್ಥಾಪನೆ ಯಾಗುವುದು ಹೆಮ್ಮೆಯ ಸಂಗತಿ ಪ್ರತಿಯೊಬ್ಬರೂ ಮಹರ್ಷಿ ವಾಲ್ಮೀಕಿ ರವರ ಆದರ್ಶ ತತ್ವ ಸಾಮಾನ್ಯ ಜನರಿಗೆ ತಿಳಿಸುವಂತಾಗಬೇಕು ಎಂದರು.

ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸದಸ್ಯರಾದ ಕೆ.ಪಿ. ತಿಪ್ಪೇಸ್ವಾಮಿ, ಎನ್ ಮಹಾಂತಣ್ಣ, ಮುಖಂಡರಾದ ಅಬ್ಬೇನಹಳ್ಳಿ ಓ. ನಾಗಣ್ಣ,ಚೌಳಕೆರೆ ಬಸಣ್ಣ, ಜಿ. ಬಿ. ಮುದಿಯಪ್ಪ, ಎಸ್ ಟಿ ಬೋರಸ್ವಾಮಿ, ಗುಂತಕೋಲ್ಮನಹಳ್ಳಿ ಜಿ. ಎಂ. ಜಯಣ್ಣ, ಕೆ.ಟಿ. ಮಲ್ಲಿಕಾರ್ಜುನ, ಆರ್. ಪಾಲಯ್ಯ, ಓಬಯ್ಯನಹಟ್ಟಿ ಸಿ. ಕುಮಾರ್, ಕರವೇ ಕನ್ನಡ ಸೇನೆ ತಾಲೂಕು ಅಧ್ಯಕ್ಷ ಪಿ ಮುತ್ತಯ್ಯ ಜಾಗನೂರಹಟ್ಟಿ, ನಾಯಕನಹಟ್ಟಿ ಹೋಬಳಿ ಅಧ್ಯಕ್ಷ ಕೆ.ಜಿ. ಮಂಜುನಾಥ್ ಜೋಗಿಹಟ್ಟಿ, ನಗರ ಘಟಕ ಅಧ್ಯಕ್ಷ ತಿಪ್ಪೇಸ್ವಾಮಿ, ಜಿ ಟಿ ತಿಪ್ಪೇಸ್ವಾಮಿ ಗೌಡಗೆರೆ, ರಾಘವೇಂದ್ರ, ನಾಗರಾಜ್ ಮೀಸೆ, ಮಲ್ಲೂರಹಳ್ಳಿ ಪ್ರಸನ್ನ ಗೌಡ, ಪ್ರಭು, ಇದ್ದರು

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading