ಚಳ್ಳಕೆರೆ
ಶೇಂಗಾ ಬಿಡಿಸುವ ಯಂತ್ರದ ವಾಹನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಸೋಮನಾಥ ಸ್ಥಳದಲ್ಲೇ ಮೃತ ಪಟ್ಟ ಘಟನೆ ಸಂಜೆ 6.30 ಸಮಯದಲ್ಲಿ ನಡೆದಿದೆ .
ಚಳ್ಳಕೆರೆ ತಾಲೂಕಿನ ಬೆಳಗೆರೆ ಹಾಗೂ ನಾರಾಯಣಪುರ ಗ್ರಾಮದ ನಡುವೆ ಈ ಘಟನೆ ನಡೆದಿದ್ದು.
ಕೆ.ಟಿ ಹಳ್ಳಿ ಗ್ರಾಮದ ಸೋಮನಾಥ (45 ) ವರ್ಷ ಹಲವು ವರ್ಷಗಳಿಂದ ಇವರ ಮಾವ ಮಂಜಣ್ಣ ಮನೆಯಲ್ಲಿ ವಾಸವಾಗಿದ್ದು ನಾರಾಯಣಪುರದಲ್ಲಿ ಮೋಟರ್ ರಿಪೇರಿ ಮಾಡಿಕೊಂಡಿದ್ದು ಇಂದು ಸಂಜೆ ತನ್ನ ಎಕ್ಸೆಲ್ ದ್ವಿಚಕ್ರ ವಾಹನದಲ್ಲಿ ನಾರಾಯಣಪುರದಿಂದ ಬೆಳಗೆರೆ ಗ್ರಾಮಕ್ಕೆ ಬರುತ್ತಿರುವಾಗ ಶೇಂಗಾ ಬಿಡಿಸುವ ಯಂತ್ರದ ವಾಹನದ ಚಾಲಕ ಎಕ್ಸೆಲ್ ವಾಹನಕ್ಕೆ ಡಿಕ್ಕಿ ಪಡಿಸಿ ಪರಾರಿಯಾಗಲು ಯತ್ನಿಸಿದ್ದಾನೆ. ವಿಷಯ ತಿಳಿದು ಬೆಳಗೆರೆ ಗ್ರಾಮದ ಯುವಕರು ವಾಹನವನ್ನು ಹಿಂಬಾಲಿಸಿ ಚಾಲಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಘಟನಾ ಸ್ಥಳಕ್ಕೆ ಚಳ್ಳಕೆರೆ ಪೊಲೀಸ್ ಇನ್ಸ್ಪೆಕ್ಟರ್ ಆರ್ ಎಫ್ ದೇಸಾಯಿ ಭೇಟಿ ನೀಡಿ ಪರಿಶೀಲನೆ ನಡೆಸಿ .ಚಳ್ಳಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
About The Author
Discover more from JANADHWANI NEWS
Subscribe to get the latest posts sent to your email.