September 15, 2025
IMG-20241113-WA0059.jpg

ಚಳ್ಳಕೆರೆ ನ.13

ಕೆರೆಕೋಡಿ ಬಿದ್ದು ತಿಂಗಳು ಕಳೆದರೂ ತಗ್ಗದ ನೀರು ಶಾಲೆಗೆ ಹೋಗಲು ಶಿಕ್ಷಕರು ಮಕ್ಕಳು ಹರಸಹಾಸ..
ಹೌದು ಇದು ಚಳ್ಳಕೆರೆ ತಾಲೂಕಿನ ನೇರ್ಲಗುಂಟೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಕಾರ್ತೀಕೇನಹಟ್ಟಿ ಗ್ರಾಮದ ಕೆರೆಯಂಗಳದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ ನಿರ್ಮಿಸಿದ್ದು ಕಳೆದ ತಿಂಗಳು ಸುರಿದ ಅಕಾಲಿಕ ಮಳೆಗೆ ಸುಮಾರು 50 ವರ್ಷಗಳ ನಂತರ ಕೆರೆತುಂಬಿ ಕೋಡಿ ಬಿದ್ದಿದ್ದು ಗ್ರಾಮದ ರೈತರು ನೀರು ಪೋಲಾಗದಂತೆ ಕೆರೆ ಕೋಡಿಗೆ ಒಂದು ಅಡಿಗೂ ಎತ್ತರ ಮಣ್ಣ ಹಸಕಿರುವುದರಿಂದ ಶಾಲಾ‌ ಸಮೀಪವೇ ನೀರು ನಿಂತಿದ್ದು 1 ರಿಂದ7 ನೇ ತರಗತಿಯವರೆಗೆ 86 ವಿದ್ಯಾರ್ಥಿಗಳಿದ್ದು 3 ಜ‌ನ ಶಿಕ್ಷಕರಿದ್ದಾರೆ.
ಕೆರೆ ತುಂಬಿ ಜಲಾವೃತಗೊಂಡಾಗ ಗ್ರಾಮದ ಸಮುದಾಯ ಭವನದಲ್ಲಿ ಸುಮಾರು 15 ದಿನಗಳು ಪಾಠ ನಡೆಸಿದ್ದಾರೆ ಮಕ್ಕಳ ಕಲಿಕೆಗೆ ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ಮತ್ತೆ ಶಾಲೆ ತರಗತಿಗಳನ್ನು ಸ್ಥಳಾಂತರಿಸಿದ್ದು ಪ್ರತಿ ನಿತ್ಯ ವಿದ್ಯರ್ಥಿಗಳನ್ನು ಗ್ರಾಮದಿಂದ ಶಾಲೆಗೆ ಶಿಕ್ಷಕರು ಶಾಲೆ ಪ್ರಾರಂಭ ಹಾಗೂ ಬಿಟ್ಟ ನಂತರ ಶಿಕ್ಷರು ಕರೆದುಕೊಂಡು ಹೋಗಿ ಬರುತ್ತಾರೆ.
ಶಾಲೆಯ ಕಟ್ಟಡಕ್ಕೆ ಸುಮಾರು ಹತ್ತು ಮೀಟರ್ ದೂರದಲ್ಲಿ ನೀರು ಇರುವುದರಿಂದ ಚಿಕ್ಕ ಮಕ್ಕಳು ನೀರಲ್ಲಿ ಆಟವಾಡುತ್ತಾರೆ ಇದನ್ನು ತಪ್ಪಿಸಲು ಶಿಕ್ಷಕರು ವಿದ್ಯಾರ್ಥಿಗಳ ಮೇಲೆ ಹದ್ದಿನ ಕಣ್ಣಿಟ್ಟು ಕಾಯುತ್ತಾರೆ ಸ್ವಲ್ಪ ಯ್ಯಾಮಾರಿದರೂ ಮಕ್ಕಳು ನೀರಲ್ಲಿ ಆಡಲು ಹೋಗಿ ಪ್ರಾಣಕ್ಕೆ ಸಂಚಕಾರ ಬರುತ್ತದೆ ಎಂದು ಪ್ರಾಣ ಭೀತಿಯಲ್ಲೇ ಮಕ್ಕಳು ಆಟ ಪಾಠ ಆಡುವುದು ಅನಿವಾರ್ಯವಾಗಿದೆ.
ಈಗಲಾದರೂ ಸಂಬಂಧ ಪಟ್ಟ ಅಧಿಕಾರಿಗಳು ಶಾಲೆಗೆ ಸೂಕ್ತ ವ್ಯವಸ್ಥೆ ಕಲ್ಪಿಸ ಬೇಕಾಗಿದೆ.

ನೀರಲ್ಲಿ ಆಟವಾಡುತ್ತಿರುವ ಮಕ್ಕಳು

ತುಂಬಿದ ಕೆರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಜಲಾವೃತಗೊಂಡಾಗ ದೃಶ್ಯ

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading