
ನಾಯಕನಹಟ್ಟಿ:: ಹೋಬಳಿಯ ಮಲ್ಲೂರಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ರೇಖಲಗೆರೆ ತಿಪ್ಪೇಸ್ವಾಮಿ ರವರಿಗೆ ಉತ್ತಮ ಸಮಾಜ ಸೇವೆಯನ್ನು ಗುರುತಿಸಿ ಮಹರ್ಷಿ ಶ್ರೀ ವಾಲ್ಮೀಕಿ ಗುರುಕುಲ ಪೀಠ ದೊಡ್ಡಬಳ್ಳಾಪುರ ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ನೌಕರರ ಒಕ್ಕೂಟ (ರಿ) ಶ್ರೀ ರಾಜ ಲಿಂಗ ಸ್ವಾಮಿ ಎಸ್.ಸಿ. ಎಸ್ .ಟಿ. ವಿದ್ಯಾ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ( ರಿ) ಜಗಳೂರು ಇವರಗಳ ಸಂಯುಕ್ತಾಶ್ರಯದಲ್ಲಿ ರಾಜವೀರ ಮದಕರಿ ನಾಯಕ ಶೌರ್ಯ ಪ್ರಶಸ್ತಿ- 2025 ವತಿಯಿಂದ ಭಾನುವಾರ ಚಿತ್ರದುರ್ಗದ ತ.ರಾ. ಸು. ರಂಗಮಂದಿರದಲ್ಲಿ ನಾಯಕನಹಟ್ಟಿ ಹೋಬಳಿಯ ರೇಖಲಗೆರೆ ತಿಪ್ಪೇಸ್ವಾಮಿ ಅವರ ಸಮಾಜ ಸೇವೆ ಗುರುತಿಸಿ ರಾಜವೀರ ಮದಕರಿ ನಾಯಕ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.




ಇದೇ ಸಂದರ್ಭದಲ್ಲಿ ಶ್ರೀ ವಾಲ್ಮೀಕಿ ಬ್ರಹ್ಮಾನಂದ ಗುರೂಜಿ ಮಹರ್ಷಿ ವಾಲ್ಮೀಕಿ ಗುರುಪೀಠ ದೊಡ್ಡಬಳ್ಳಾಪುರ, ರಾಜ ಮದಕರಿ ನಾಯಕ 7ನೇ ತಲೆಮಾರಿಯ ಮರಿ ಮೊಮ್ಮಗ ರಾಜ ಮದಕರಿ ನಾಯಕ, ಕರ್ನಾಟಕ ವಾಲ್ಮೀಕಿ ನೌಕರರ ಒಕ್ಕೂಟದ ರಾಜ್ಯಾಧ್ಯಕ್ಷ ಪಿ.ಮೋಹನ್ ಕಿಶೋರ್, ಶ್ರೀ ರಾಜಲಿಂಗಸ್ವಾಮಿ ಎಸ್ ಸಿ ಎಸ್ ಟಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಕೆ.ಆರ್. ತಿಪ್ಪೇಸ್ವಾಮಿ ಜಗಳೂರು, ಇನ್ನೂ ಮುಂತಾದವರು ಉಪಸ್ಥಿತರಿದ್ದರು
About The Author
Discover more from JANADHWANI NEWS
Subscribe to get the latest posts sent to your email.