February 14, 2026
FB_IMG_1771005823624.jpg

ಬೆಂಗಳೂ\nರು: ರಾಜ್ಯ ಸರ್ಕಾರಿ ಕಚೇರಿಗಳ ನಡವಳಿಕೆ ಮತ್ತು ಶಿಸ್ತಿನ ಬಗ್ಗೆ ಸಾರ್ವಜನಿಕರಿಂದ ಬಂದ ದೂರುಗಳ ಹಿನ್ನೆಲೆ, ಕರ್ನಾಟಕ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (DPAR) ಎಲ್ಲಾ ಸರ್ಕಾರಿ ನೌಕರರಿಗೆ ಹೊಸ ಹಾಗೂ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ. ನಿಯಮ ಉಲ್ಲಂಘನೆ ಮಾಡಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ.ಹೊಸ ನಿಯಮಗಳ ಮುಖ್ಯಾಂಶಗಳು
1. ಸಭ್ಯ ವಸ್ತ್ರಸಂಹಿತೆ ಕಡ್ಡಾಯ
ನೌಕರರು ಕಚೇರಿಗೆ ಸರ್ಕಾರದ ಘನತೆಗೆ ತಕ್ಕಂತೆ ಸಭ್ಯ ಹಾಗೂ ಗೌರವಾನ್ವಿತ ಉಡುಪು ಧರಿಸಬೇಕು.
ಹರಿದ ಜೀನ್ಸ್ (Torn Jeans), ಟೀ-ಶರ್ಟ್, ತೋಳಿಲ್ಲದ (Sleeveless) ಹಾಗೂ ಅತಿ ಬಿಗಿಯಾದ ಉಡುಪುಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಪುರುಷರು ಪ್ಯಾಂಟ್ ಮತ್ತು ಶರ್ಟ್ ಧರಿಸಬೇಕು.
ಮಹಿಳೆಯರು ಸೀರೆ ಅಥವಾ ಚೂಡಿದಾರ್ ಧರಿಸಲು ಸೂಚಿಸಲಾಗಿದೆ.
2. ಚಲನವಲನ ವಹಿ (Movement Register) ನಿರ್ವಹಣೆ
ಎಲ್ಲಾ ನೌಕರರು ಬೆಳಗ್ಗೆ 10:10ರೊಳಗೆ ಕಚೇರಿಯಲ್ಲಿ ಹಾಜರಿರಬೇಕು.
ಅಧಿಕೃತ ಅಥವಾ ವೈಯಕ್ತಿಕ ಕಾರಣಗಳಿಂದ ಕಚೇರಿಯಿಂದ ಹೊರಗೆ ಹೋಗುವಾಗ ‘ಚಲನವಲನ ವಹಿ’ಯಲ್ಲಿ ಕಡ್ಡಾಯವಾಗಿ ದಾಖಲಿಸಬೇಕು.
ದಾಖಲಿಸದೆ ಸೀಟಿನಲ್ಲಿ ಇಲ್ಲದಿದ್ದರೆ ಅದನ್ನು ‘ಅನಧಿಕೃತ ಗೈರುಹಾಜರಿ’ ಎಂದು ಪರಿಗಣಿಸಲಾಗುತ್ತದೆ.
3. ನಗದು ಘೋಷಣೆ ವಹಿ (Cash Declaration Register)
ಪಾರದರ್ಶಕತೆ ಕಾಪಾಡಲು, ನೌಕರರು ಕಚೇರಿಗೆ ಪ್ರವೇಶಿಸುವಾಗ ಮತ್ತು ನಿರ್ಗಮಿಸುವಾಗ ತಮ್ಮ ಬಳಿ ಇರುವ ಹಣದ ಮೊತ್ತವನ್ನು ನಗದು ಘೋಷಣಾ ವಹಿಯಲ್ಲಿ ನಮೂದಿಸಬೇಕು.
4. ಶನಿವಾರ ಖಾದಿ ಉಡುಗೆ
ಖಾದಿ ಉತ್ಪನ್ನಗಳನ್ನು ಉತ್ತೇಜಿಸಲು ಪ್ರತಿ ತಿಂಗಳ ಮೊದಲ ಶನಿವಾರ ನೌಕರರು ಸ್ವಯಂಪ್ರೇರಿತರಾಗಿ ಖಾದಿ ಉಡುಪನ್ನು ಧರಿಸಲು ಸೂಚಿಸಲಾಗಿದೆ.
🔸 ಅಧಿಕಾರಿಗಳಿಗೆ ನಿರ್ದೇಶನ
ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಹಾಗೂ ನೌಕರರು ನಗದು ಘೋಷಣೆ ಮತ್ತು ಚಲನವಲನ ವಹಿಗಳನ್ನು ಸರಿಯಾಗಿ ನಿರ್ವಹಿಸುತ್ತಿದ್ದಾರೆಯೇ ಎಂಬುದನ್ನು ಆಗಾಗ್ಗೆ ಪರಿಶೀಲಿಸುವಂತೆ ಇಲಾಖಾ ಮುಖ್ಯಸ್ಥರು ಮತ್ತು ಜಿಲ್ಲಾಧಿಕಾರಿಗಳಿಗೆ ಸರ್ಕಾರ ಸೂಚಿಸಿದೆ.
ಸರ್ಕಾರದ ಈ ಕ್ರಮವು ಕಚೇರಿ ಶಿಸ್ತು ಮತ್ತು ಪಾರದರ್ಶಕತೆಯನ್ನು ಹೆಚ್ಚಿಸಲು ಕೈಗೊಳ್ಳಲಾಗಿದೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading