ಸಾಣೀಕೆರೆ ಜ.13ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ(ರಿ) ಸಾಣೀಕೆರೆ ಯೋಗ ಶಾಖೆ ಹಾಗೂ ಮಾರುತಿ ಯುವಕ ಸಂಘದ ಸಹೋಗದಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಕಾರ್ಯಕ್ರಮ ನಡೆಯಿತು ಭಾರತದ ಆಧ್ಯಾತ್ಮಿಕ ಗುರು ವೀರ ಸನ್ಯಾಸಿಯಾದ ಸ್ವಾಮಿ ವಿವೇಕಾನಂದರು ಭಾರತದ.ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯಿಸಿ ಮೂಲಕ ದ್ರರಿದ್ರಾ.ನಾರಾಯಣ ಎಂಬ.ಘೋಷಣೆ ಯೊಂದಿಗೆ ಬಡವರ ಸೇವೆಯಲ್ಲಿ ದೇವರನ್ನು ಕಾಣಿ, ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಎಂದು ಯುವ ಜನತೆಗೆ ಕರೆ ಕೊಟ್ಟಂತಹ ಮಹಾನ್ ಆದ್ಯಾತ್ಮಿಕ ಚಿಂತಕರನ್ನು ಪಡೆದ ನಾವೆಲ್ಲರೂ ಧನ್ಯ ಇಂತಹ ಮಹಾನ್ ವ್ಯಕ್ತಿಯ.ತತ್ವ ಆದರ್ಶಗಳನ್ನು ಅಳವಡಿಸಿಕೊಳ್ಳುವ ಮೂಲಕ..ನಮ್ಮ ಜೀವನದ ಗುರಿ ಸಾಧಿಸಬೇಕು ,ಯುವಕರು ದುಶ್ಚಟಗಳಿಂದ ದೂರವಾಗಿ ತಂದೆ ತಾಯಿ.ಸೇವೆ.ಮಾಡಿ,ಸಮಾಜದ ಒಳಿತು ಕಾರ್ಯಗಳಲ್ಲಿ ಭಾಗವಹಿಸಬೇಕು ಎಂದು ರಾಜ್ಯ ಯುವ ಪ್ರಶಸ್ತಿ. ಪುರಸ್ಕೃತ ದಯಾನಂದ ಕಾವಲ್ ವಿದ್ಯಾರ್ಥಿಗಳಿಗೆ,ಯುವಕರಿಗೆ ಮಾರ್ಗದರ್ಶನ ನೀಡಿದರು ಈ ಸಂದರ್ಭದಲ್ಲಿ ಯೋಗ ಶಾಖೆಯ ಹಿರಿಯ.ಯೋಗ.ಬಂಧು ನಿವೃತ್ತ ಸೇನಾಧಿಕಾರಿಗಳಾದ ಜಿ.ಓಬಣ್ಣ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಟಾಟನೆ ಮಾಡಿದರು,ಕಾರ್ಯಕ್ರಮದಲ್ಲಿ ಸಾಣೀಕೆರೆ ಗ್ರಾಮ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರಾದ ಜೆ ತಿಪ್ಪೇಸ್ವಾಮಿ, ಮಾರುತಿ ಯುವಕ ಸಂಘದ ಪದಾಧಿಕಾರಿಗಳಾದ ತರಂಗ,ತಿಮಣ್ಣ, ಕಿರಣ್, ಸುನೀಲ್ ಹಾಗೂ ಯೋಗ ಶಾಖೆಯ ವೆಂಕಟೇಶ್, ಮಂಜು ನಾಥ,ಹೆಚ್, ತಿಪ್ಪೇಸ್ವಾಮಿ, ಎಸ್ ,ವೀರೇಶ್, ಕರಿಯಣ್ಣ, ಜಗದೀಶ್,ರಂಗಸ್ವಾಮಿ ರಾಧಮಣಿ,ಶಾರದಮ್ಮ ಶ್ವೇತಾ ಗ್ರಾಮದ ಯುವಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.