September 15, 2025
IMG-20241111-WA0110.jpg

ಚಳ್ಳಕೆರೆ ನ.12ಚಳ್ಳಕೆರೆ ತಾಲೂಕಿನ ಕಮ್ಮತ್ ಮರಿಕುಂಟೆ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ (ನಿ).ದ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಒಕ್ಕೂಟದ ಜಿಲ್ಲಾ ನಿರ್ದೇಶಕ ಬಿ, ಸಿ ಸಂಜೀವ ಮೂರ್ತಿಯವರು ಉದ್ಘಾಟಿಸಿ ಸಂಘದ ಹಾಲು ಉತ್ಪಾದಕರ ಒಕ್ಕೂಟದಿಂದ ದೊರೆಯಬಹುದಾದ ಸೌಲಭ್ಯಗಳ ಕುರಿತು ಹಾಗೂ ಗುಣಮಟ್ಟದ ಹಾಲು ಶೇಖರಣೆ ಬಗ್ಗೆ ಸವಿವರವಾಗಿ ತಿಳಿಸಿದರು ಕಮ್ಮತ್ ಮರಿಕುಂಟೆ ಸಂಘದ ಅಧ್ಯಕ್ಷ ಎಚ್ ಆಂಜನೇಯ ರವರು ಮಾತನಾಡಿ ಈ ಒಂದು ಗ್ರಾಮದಿಂದ ಮತ್ತೊಂದು ಗ್ರಾಮಕ್ಕೆ ಹೋಗಿ ಹಾಲನ್ನು ಅಲ್ಲಿನ ಸಂಘಕ್ಕೆ ಕೊಟ್ಟು ಬರುವಂತಿತ್ತು. ಈಗ ನಮ್ಮ ಗ್ರಾಮದಲ್ಲಿ ಹಾಲು ಉತ್ಪಾದಕರ ಸಂಘವನ್ನು ಕಲ್ಪಿಸಿದಂತ ಕಾರ್ಯವನ್ನು ನಮ್ಮ ಜಿಲ್ಲಾ ಒಕ್ಕೂಟದ ಸದಸ್ಯರಾದ ಬಿ, ಸಿ ಸಂಜೀವ ಮೂರ್ತಿರವರು ಕೈಜೋಡಿಸಿದ ಕಾರಣ ಈ ಒಂದು ಸಹಕಾರ ಸಂಘ ಇಂದು ಉದ್ಘಾಟನೆಗೆ ಸಾಕ್ಷಿ ಆಯಿತು ಎಂದು ಅಭಿನಂದಿಸಿದರು ಹಾಗೂ ಸಹಾಯಕ ವಿಸ್ತರಣಾಧಿಕಾರಿ, ಪೃಥ್ವಿ ಹಾಗೂ ವಿಸ್ತರಣಾಧಿಕಾರಿಗಳಾದ ನಯಾಜ್ ಬೇಗ್ ರವರು ಮಾತನಾಡಿ ಒಕ್ಕೂಟದ ತಾಂತ್ರಿಕ ಸೌಲಭ್ಯಗಳ ಕುರಿತು ಉತ್ಪಾದಕರಿಗೆ ತಿಳಿಸಿದರು ಈ ಸಂದರ್ಭದಲ್ಲಿ ತಾಲೂಕು ಪಶು ವೈದ್ಯಧಿಕಾರಿಗಳಾದ ಡಾಕ್ಟರ್ ಸತ್ಯನಾರಾಯಣ ಮಾತನಾಡಿ ಜಾನುವಾರಗಳಿಗೆ ಯಾವುದೇ ರೋಗಕ್ಕೆ ತುತ್ತಾದಾಗ ಅದರ ಚಿಕಿತ್ಸೆ ಕೊಡಿಸುವ ಸೌಲಭ್ಯ ಕುರಿತು ತಿಳಿಸಿದರು ಹಾಗೂ ಈ ಸಂದರ್ಭದಲ್ಲಿ ಕಾರ್ಯದರ್ಶಿ ಗೌರಮ್ಮ ಮತ್ತು ಉಪಾಧ್ಯಕ್ಷ ಕೆ ಆರ್ ಶ್ರೀನಿವಾಸ್ ಮತ್ತು ಹಾಲು ಉತ್ಪಾದಕ ಸಂಘದ ಸದಸ್ಯರಾದ ಕಾಂತರಾಜ್, ಗೋವಿಂದರಾಜ್, ಈರಣ್ಣ, ಗೋವಿಂದ ರೆಡ್ಡಿ, ತಿಮ್ಮಕ್ಕ, ಹರೀಶ್, ಹಾಗೂ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading