July 12, 2025
IMG-20250711-WA0207.jpg

ಜಗಳೂರು:: ಮಕ್ಕಳ ಪೋಷಣೆ ಲಾಲನೆ ಪಾಲನೆ ಬಹಳ ಮುಖ್ಯ ಎಸ್ ಕೆ ಒ ಎಸ್‌ ಟಿ ಮೆಮೋರಿಯಲ್ ಶಾಲೆಯ ಕಾರ್ಯದರ್ಶಿ ಕೆ.ಆರ್. ತಿಪ್ಪೇಸ್ವಾಮಿ ಹೇಳಿದರು.

ಶುಕ್ರವಾರ ಜಗಳೂರು ತಾಲೂಕಿನ ಹಿರೇಮಲ್ಲನಹೊಳೆ ಗ್ರಾಮದ ಶ್ರೀ ರಾಜ ಲಿಂಗಸ್ವಾಮಿ ಎಸ್ ಸಿ/ಎಸ್ ಟಿ ವಿದ್ಯಾ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ (ರಿ) ಜಗಳೂರು ವತಿಯಿಂದ ಎಸ್ ಕೆ ಒ ಎಸ್‌ ಟಿ ಮೆಮೋರಿಯಲ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಅಕ್ಷರಾಭ್ಯಾಸ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಕ್ಕಳಿಗೆ ಅಕ್ಷರ ಅಭ್ಯಾಸವನ್ನು ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿ ಅವರು ಸಂಸ್ಕಾರಯುತ ಮಕ್ಕಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡುವಲ್ಲಿ ಶಿಕ್ಷಕರ ಹಾಗೂ ಪೋಷಕರ ಪಾತ್ರ ಮಹತ್ವವಾದದ್ದು ಪ್ರತಿವರ್ಷ ಶಾಲಾ ಆರಂಭದ ವೇಳೆ ಶಾಲೆಯ ಪ್ರತಿ ಮಕ್ಕಳಿಗೆ ಅಕ್ಷರ ಅಭ್ಯಾಸವನ್ನು ಮಾಡಿಸುವ ಮೂಲಕ ಶೈಕ್ಷಣಿಕ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ವಕೀಲ ಪ್ರವೀಣ್ ಕುಮಾರ್, ಅರ್ಚಕ ತಿಪ್ಪೇಸ್ವಾಮಿ, ಶಾಲೆಯ ಮುಖ್ಯ ಶಿಕ್ಷಕಿ ಓ. ರೇಖಾ, ಸಹ ಶಿಕ್ಷಕ ತಿಪ್ಪೇಸ್ವಾಮಿ, ಶಿಕ್ಷಕಿರಾದ ಲತಾ ,ಶಾಲಿನಿ ,ನಾಗವೇಣಿ, ಶಾಂತಲಾ ,ಮಂಜುಳಾ, ಭಾಗ್ಯಮ್ಮ ,ನಾಗರತ್ನ, ವಾಹನ ಚಾಲಕ ಬಸವರಾಜ್, ಆಯಾ ನಾಗವೇಣಿ, ಸೇರಿದಂತೆ ಪೋಷಕರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇದ್ದಾರೆ

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading