January 29, 2026
IMG-20251210-WA0251.jpg

ನಾಯಕನಹಟ್ಟಿ: ಹೋಬಳಿಯ ಎನ್ ದೇವರಹಳ್ಳಿ ಗ್ರಾಮ ಪಂಚಾಯಿತಿಗೆ ಬುಧವಾರ ನಡೆದ ಅಧ್ಯಕ್ಷ ಆಯ್ಕೆ ಚುನಾವಣೆಯಲ್ಲಿ ನೂತನ ಅಧ್ಯಕ್ಷೆಯಾಗಿ ಡಿ.ಪಿ. ಸೂರಮ್ಮ ಶಂಕರ್ ಮೂರ್ತಿ ಅವಿರೋಧವಾಗಿ ಆಯ್ಕೆಯಾದರು.

ಒಟ್ಟು 14 ಸದಸ್ಯರ ಬಲವುಳ್ಳ ಈ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸ್ಥಾನವು ಸಾಮಾನ್ಯ ಮಹಿಳೆಗೆ ಮೀಸಲಿತ್ತು. ಹಿಂದಿನ ಅಧ್ಯಕ್ಷೆ ಸರಿತಾ ಬಾಯಿ ರಾಜ ನಾಯ್ಕ, ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆಸಲಾಯಿತು. ಅಧ್ಯಕ್ಷೆ ಸ್ಥಾನಕ್ಕೆ ಡಿ.ಪಿ. ಸೂರಮ್ಮ ಶಂಕರ್ ಮೂರ್ತಿ ಒಬ್ಬರೇ ನಾಮ ಪತ್ರ ಸಲ್ಲಿಸಿದ ಕಾರಣದಿಂದ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾ ಅಧಿಕಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್. ಸುರೇಶ್ ತಿಳಿಸಿದರು.

ಚುನಾವಣಾ ಪ್ರಕ್ರಿಯೆಯಲ್ಲಿ 11 ಜನ ಸದಸ್ಯರು ಹಾಜ-ರಿದ್ದರು.

ಇದೇ ವೇಳೆಯಲ್ಲಿ ಕಾಂಗ್ರೆಸ್ ಮುಖಂಡ ನೇರಲಗುಂಟೆ ಸೂರನಾಯಕ, ಜಿ. ತಿಪ್ಪೇಸ್ವಾಮಿ, ಭೀಮನಕೆರೆ ಪಾಲಯ್ಯ, ರುದ್ರಮುನಿ, ವಕೀಲ ಉಮಾಪತಿ, ಜಿ.ಬಿ. ಮುದಿಯಪ್ಪ, ಬದರು ಹುಕುಂ ಕಮಿಟಿ ಸದಸ್ಯ ಪಿ.ಜಿ.
ಬೋರನಾಯಕ, ನಲಗೇತನಹಟ್ಟಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಪಿ.ಎನ್ ಮುತ್ತಯ್ಯ, ರಾಮಸಾಗರ ಕಾಟಯ್ಯ, ವಕೀಲ ಹಿರೇಹಳ್ಳಿ ಮಲ್ಲೇಶ್, ಜಿ.ವಿ. ಕರಿಯಣ್ಣ, ಗುಂತಕೋಲ್ಮನಹಳ್ಳಿ ಕೆ.ಟಿ. ಮಲ್ಲಿಕಾರ್ಜುನ್, ಜಿ.ಎಂ. ಜಯಣ್ಣ ಗೌಡಗೆರೆ ಟಿ ರಂಗಣ್ಣ, ಜಿ.ಟಿ ತಿಪ್ಪೇಸ್ವಾಮಿ, ಎನ್ ದೇವರಹಳ್ಳಿ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಸುಮಾ ಚಂದ್ರ ಬೋಸ್, ಸದಸ್ಯರಾದ ರತ್ನಮ್ಮ ರಾಜಣ್ಣ, ರಾಯಮ್ಮ ಬೈಯಣ್ಣ,ಎಸ್ ಸಿದ್ದಪ್ಪ, ಗುರುಮೂರ್ತಿ, ಅಕ್ಕಮ್ಮ, ಟಿ ಕಾಟಯ್ಯ, ಶಿವರುದ್ರಮ್ಮ, ಡಾ. ಪಿ.
ಕಾಟಂಲಿಂಗಯ್ಯ, ರಾಜಣ್ಣ, ಹಾಗೂ ನಾಯಕನಹಟ್ಟಿ ಪಿಎಸ್ಐ ಜಿ. ಪಾಂಡುರಂಗಪ್ಪ ,ಪಿಡಿಒ ಕೆ.ಓ. ಶಶಿಕಲಾ, ಕಾರ್ಯದರ್ಶಿ ಚಿದಾನಂದ, ದ್ವಿತೀಯ ದರ್ಜೆ ಸಹಾಯಕ ಎನ್ ಬಿ. ವೀರನಾಯಕ, ಬಿಲ್ ಕಲೆಕ್ಟರ್ ಎಂ.ಬಿ. ರಘು ಸೇರಿದಂತೆ ವಿವಿಧ ಹಳ್ಳಿಗಳ ಮುಖಂಡರು ಎನ್ .ದೇವರಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಸ್ಥರು ಇದ್ದರು

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading