January 30, 2026
IMG-20241210-WA0081.jpg

ಹಿರಿಯೂರು.ಡಿ.10ಯಲ್ಲದಕೆರೆ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದು ಬಂದ KSRTC ಬಸ್ -ಆರ್ ಜಯಪ್ರಕಾಶ್

ಕಳೆದ ನಾಲ್ಕು ತಿಂಗಳ ಹಿಂದೆ ಸಾರಿಗೆ ಸೌಲಭ್ಯ ಕೊರತೆಯಿಂದ ಯಲ್ಲದಕೆರೆ ಗ್ರಾಮ ಪಂಚಾಯತಿ ವಿದ್ಯಾರ್ಥಿಗಳು ಪ್ರತಿಭಟಿಸಿದ್ದರು. ಸುದ್ದಿ ತಿಳಿದ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಬಸ್ ಬಿಡುವಂತೆ ಆದೇಶಿಸಿದ್ದರೂ ಕೂಡ ಸಾರಿಗೆ ಇಲಾಖೆ ಅಧಿಕಾರಿಗಳು ವಿಳಂಬ ಮಾಡಿ ಸತಾಯಿಸುತ್ತ ಬಂದಿದ್ದರು.ಬಸ್ಸು ಇಂದು ಬಂದಿತು ನಾಳೆ ಬಂದಿತು ಎಂದು ಕಾದು ಕಾದು ಸುಸ್ತಾದ ವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ಸೇರಿ ಇತ್ತೀಚಿಗೆ ರಸ್ತೆ ತಡೆ ಚಳುವಳಿಯನ್ನು ನಡೆಸಿದರು
ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಸಾರಿಗೆ ಇಲಾಖೆ ಅಧಿಕಾರಿಗಳು ಕೊನೆಗೂ ಎಚ್ಚೆತ್ತುಕೊಂಡು ಒಂದು ಬಸ್ಸನ್ನ ಮಾತ್ರ ಬಿಟ್ಟಿದ್ದಾರೆ ಎಂದು ಇಂದು ವಿದ್ಯಾರ್ಥಿಗಳ ಜೊತೆ ಸೇರಿ ಭಾರತೀಯ ಕಿಸಾನ್ ಸಂಘದ ಕಾರ್ಯದರ್ಶಿ ಆರ್ ಜಯಪ್ರಕಾಶ್ ನೇತೃತ್ವದಲ್ಲಿ ಪೂಜೆ ಸಲ್ಲಿಸಿ ಸಿಹಿ ಹಂಚಿ ಮಕ್ಕಳ ಸಂಚಾರಕ್ಕೆ ಶುಭ ಕೋರಿದರು. ಈ ಸಂದರ್ಭದಲ್ಲಿ ಮಾತನಾಡಿದ ಆರ್ ಜಯಪ್ರಕಾಶ್ ಸುಮಾರು 300 ಜನ ವಿದ್ಯಾರ್ಥಿಗಳು ದಿನನಿತ್ಯ ಸಂಚರಿಸುತ್ತಿದ್ದು ಒಂದು ಬಸ್ಸು ಸಾಕಾಗುವುದಿಲ್ಲ ಇನ್ನೂ ಎರಡು ಬಸ್ಸು ಬೇಕೆಂದು ಮನವಿ ಮಾಡಿದ್ದಾರೆ. ದಸೂಡಿ -ಶೇಷಪ್ಪನಹಳ್ಳಿ,ಬ್ಯಾರಮಡು,ಚಿಗಳಿಕಟ್ಟೆ,ಕೆ ಕೆ ಹಟ್ಟಿ,ಯಲ್ಲದಕೆರೆ,ಹಿಂಡಸಕಟ್ಟೆ ಮಾರ್ಗದಲ್ಲಿ ಸಂಚರಿಸುವವರಿಗೆ ಒಂದು ಬಸ್ ಸಾಕಾಗುವುದಿಲ್ಲ,ಇನ್ನೂ ಎರಡು ಬಸ್ಸು 4 ಸಿಂಗಲ್ ಮಾಡಿ ಓಡಿಸಲು ಆಗ್ರಹ ಪೂರ್ವಕ ಒತ್ತಾಯ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಮುಖಂಡರಾದ ನಟರಾಜು,ಹಾಲೇಶ್,ಗ್ಯಾಸ್ ಕರಿಯಪ್ಪ ಹಾಗೂ ವಿದ್ಯಾರ್ಥಿಗಳು ಸಂತೋಷ್ ಕುಮಾರ್ ಎಲ್ಎಲ್‌ಬಿ ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading