December 15, 2025
IMG-20251110-WA0136.jpg

ಚಳ್ಳಕೆರೆ ನ.10

ದಿನಗೂಲಿ ಕೆಲಸಮಾಡುತ್ತಾ ಕುಟುಂಬವನ್ನು ನಿಭಾಯಿಸಿರುವ ಸರಳ ಕೂಲಿ ಕಾರ್ಮಿಕರ ಕುಟುಂಬದಲ್ಲಿ ಹುಟ್ಟಿ ಬೆಳೆದ ಚೌಲಿಹಳ್ಳಿ ಗ್ರಾಮದ ಸಂದೀಪ ಎಲ್. ಅವರು, ತಮ್ಮ ತಾಳ್ಮೆ, ಪರಿಶ್ರಮ ಮತ್ತು ಗಟ್ಟಿಯಾದ ಶೈಕ್ಷಣಿಕ ಬದ್ಧತೆಯಿಂದ ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ, ಶಿವಮೊಗ್ಗ ನಿಂದ ಪಿಎಚ್.ಡಿ (ಡಾಕ್ಟರೇಟ್) ಪದವಿಗೆ ಪಾತ್ರರಾಗಿದ್ದಾರೆ.

ಶ್ರೀ ಲೋಕೇಶ್ವರಪ್ಪ ಮತ್ತು ಶ್ರೀಮತಿ ತಿಪ್ಪಮ್ಮ ದಂಪತಿಗಳ ಪುತ್ರರಾದ ಸಂದೀಪ ಅವರು, ಬಡತನದ ನಡುವೆಯೂ “ವಿದ್ಯೆ ಎನ್ನುವುದು ಬದುಕನ್ನು ಬದಲಿಸುವ ಶಕ್ತಿ” ಎಂಬ ನಂಬಿಕೆಯನ್ನು ಜೀವನ ಮೌಲ್ಯವನ್ನಾಗಿ ಮಾಡಿಕೊಂಡು, ಶೈಕ್ಷಣಿಕ ಕ್ಷೇತ್ರದಲ್ಲಿ ಹೂವಿನ ಗಿಡದಂತೆ ಬೆಳೆಯಲು ಪ್ರಯತ್ನಿಸಿದರು.

ಇವರು
“ಶಿಕ್ಷಕರ ಶಿಕ್ಷಣ ಸಂಸ್ಥೆಗಳ ಸಾಂಸ್ಥಿಕ ವಾತಾವರಣ, ಪ್ರಶಿಕ್ಷಕರ ವೃತ್ತಿ ನೈತಿಕತೆ ಹಾಗೂ ಪ್ರಶಿಕ್ಷಕರ–ಪ್ರಶಿಕ್ಷಣಾರ್ಥಿಗಳ ಶೈಕ್ಷಣಿಕ ಸಂಬಂಧಗಳ ಅಧ್ಯಯನ”
ಎಂಬ ಅತಿ ಮಹತ್ವದ ಮತ್ತು ಗಂಭೀರ ಸಂಶೋಧನೆಯ ಮೇಲೆ ಅಧ್ಯಯನ ನಡೆಸಿ, ಪಿಎಚ್.ಡಿ ಪದವಿ ಪಡೆದಿದ್ದಾರೆ.

ಈ ಸಂಶೋಧನೆಗೆ ಕುವೆಂಪು ವಿಶ್ವವಿದ್ಯಾಲಯದ ಖ್ಯಾತ ಶಿಕ್ಷಣಶಾಸ್ತ್ರ ತಜ್ಞರಾದ
ಪ್ರೊ. ಜಗನ್ನಾಥ್ ಕೆ. ಡಾಂಗೆ
ಇವರು ಮಾರ್ಗದರ್ಶಕರಾಗಿ ಮಾರ್ಗದರ್ಶನ ನೀಡಿದ್ದಾರೆ.

“ಬಡತನ ಅಡ್ಡಿಯಲ್ಲ, ಗುರಿಯೊಂದಿದ್ದರೆ ಅವಕಾಶಗಳು ಸ್ವಯಂ ಲಭಿಸುತ್ತವೆ” ಎಂಬುದನ್ನು ತಮ್ಮ ಬದುಕಿನ ಮೂಲಕ ಸಾಬೀತುಪಡಿಸಿರುವ ಸಂದೀಪ ಅವರ ಈ ಶೈಕ್ಷಣಿಕ ಸಾಧನೆಗೆ —
ಸ್ನಾತಕೋತ್ತರ ಶಿಕ್ಷಣಶಾಸ್ತ್ರ ವಿಭಾಗದ ಅಧ್ಯಕ್ಷರು, ಪ್ರಾಧ್ಯಾಪಕರು, ಸಿಬ್ಬಂದಿ ವರ್ಗ, ಕುಟುಂಬದವರು, ಹಿತೈಷಿಗಳು ಮತ್ತು ಸ್ನೇಹಿತರು ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.

ಗ್ರಾಮೀಣ ಪರಿಸರದಿಂದ ಬಂದು ಎಷ್ಟೇ ಸವಾಲುಗಳಿದ್ದರೂ ಗುರಿ, ಪರಿಶ್ರಮ ಮತ್ತು ನಂಬಿಕೆಯಿಂದ ಜೀವನ ಶ್ರೇಷ್ಠವಾಗಬಹುದು ಎಂಬುದಕ್ಕೆ ಸಂದೀಪ ಅವರ ಬದುಕೇ ಪ್ರತೀಕ್ಷೆಯ ದೀಪ.ಸಂದೀಪ. ಎಲ್
ದೂರವಾಣಿ:7829276336

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading