March 16, 2026

ಚಳ್ಳಕೆರೆ ‌ಅ.10

ಭಾರತೀಯ ಕಿಸಾನ್ ಸಂಘದ ಚಿತ್ರದುರ್ಗ ಜಿಲ್ಲಾ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದ ಸಭೆಯನ್ನು ಚಳ್ಳಕೆರೆ ನಗರದ ಪ್ರವಾಸಿ ಮಂದಿರದಲ್ಲಿ ನಡೆಸಲಾಯಿತು.ಈ ಸಭೆಗೆ ಪ್ರಾಂತ ಸಂಘಟನಾ ಕಾರ್ಯದರ್ಶಿಗಳಾದ .ನಾರಾಯಣ ಸ್ವಾಮಿ ಜೀಯವರು ಹಾಗೂ ಚುನಾವಣಾ ಅಧಿಕಾರಿಗಳಾಗಿ ರಾಜ್ಯ ಕಾರ್ಯಕಾರಿಣಿ .ಶಾಂತಪ್ಪ ಗೌಡರು ಭಾಗವಹಿಸಿದ್ದರು.ನೂತನ ಜಿಲ್ಲಾಧ್ಯಕ್ಷ ರಾಗಿ ಕರಿಕೆರೆ ತಿಪ್ಪೇಸ್ವಾಮಿ,ಹಾಗೂ ಪ್ರಧಾನ ಕಾರ್ಯದರ್ಶಿಯಾಗಿಮಂಜುನಾಥ ಕಾತ್ರಿಕೇನಹಳ್ಳಿ, ಉಪಾಧ್ಯಕ್ಷರಾಗಿ ಹನುಮಂತಪ್ಪ ನಾಗತಿಹಳ್ಳಿ, ಸುಬ್ರಮಣಿ ಲಕ್ಕವ್ವನಹಳ್ಳಿ,ಕೋಶಾಧ್ಯಕ್ಷ ರಾಗಿ ಏಕಾಂತ್ ಹಿರೇಮದುರೆ,ಮಹಿಳಾ ಪ್ರಮುಖ್ ರಾಗಿ ರಮ್ಯ ಲಕ್ಕವ್ವನಹಳ್ಳಿ,ಹಾಗೂ ಜಿಲ್ಲಾ ಕಾರ್ಯಕಾರಿಣಿ ಸದಸ್ಯರುಗಳಾಗಿ  ಪಂಚಾಕ್ಷರಿ ಸ್ವಾಮಿ ನಾಯಕನಹಟ್ಟಿ,ತಿಪ್ಪೇಸ್ವಾಮಿ ಬೊಂಬೇರಹಳ್ಳಿ,ಜ್ಞಾನೇಶ್ವರ ದೊಡ್ಡ ಸಿದ್ದವ್ವ ನಹಳ್ಳಿ, ಪುಟ್ಟರಾಜು ಕಾತ್ರಿಕೇನಹಳ್ಳಿ, ವೆಂಕಟೇಶ್ ರೆಡ್ಡಿ ರಾಮಜೋಗಿಹಳ್ಳಿ ಅಭಿನಯ್ ಮೀರಾಸಾಭಿಹಳ್ಳಿ, ಪುಟ್ಟರಾಜಣ್ಣ ಹೊಸದುರ್ಗ, ವೀರೇಶ್ ಚಿತ್ರದುರ್ಗ, ಕೃಷ್ಣಾರೆಡ್ಡಿ ಹೊನ್ನೂರು, ಸುರೇಶ್ ಹೊಳಲ್ಕೆರೆ,ಚಿದಾನಂದ ಹೊಳಲ್ಕೆರೆ, ಹೆಚ್.ಪೆದ್ದಣ್ಣ ಕಾಮಸಮುದ್ರ ಇವರುಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಹಾಗೂ ಹೊಳಲ್ಕೆರೆ ತಾಲ್ಲೂಕಿನ ಅಧ್ಯಕ್ಷರಾಗಿ ಸುರೇಶಣ್ಣ ಪ್ರಧಾನ ಕಾರ್ಯದರ್ಶಿಗಳಾಗಿ ಚಿದಾನಂದ ಇವರುಗಳನ್ನು ಆಯ್ಕೆ ಮಾಡಲಾಯಿತು.

ಈ ಆಯ್ಕೆ ಕಾರ್ಯಕ್ರಮದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಭಾಗವಹಿಸಿ ಸಹಕರಿಸಿದ ಜಿಲ್ಲೆಯ ಎಲ್ಲಾ ತಾಲ್ಲೂಕು ಹಾಗೂ ಗ್ರಾಮಸಮಿತಿಯ ಪದಾಧಿಕಾರಿಗಳಿಗೆ ತುಂಬು ಹೃದಯದ ಅಭಿನಂದನೆಗಳು
ಮಂಜುನಾಥ.ಕಾತ್ರಿಕೇನಹಳ್ಳಿ
ಜಿಲ್ಲಾ ಪ್ರಧಾನ ಕಾರ್ಯದರ್ಶಿ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading