ಜೋಕಾಲಿ
ಬರೆದವ್ನೆ ಬ್ರಹ್ಮ
ಅವನಿಗೆ ಅನ್ನಿಸಿದಂಗೆ,
ಸಾಗುತೈತಿ ಜೀವನ
ಅವನು ಹೇಳ್ದಂಗೆ,
ಆಡಾಕತ್ತೀವಿ ನಾವು
ಅವನು ಆಡಿಸಿದಂಗ,
ನಡಿತೈತಿ ಬಂಡಿ ನಿಲ್ದಂಗೆ,
ಪಡುತ್ತಿಲ್ಲ ಮನಸ್ಸು
ಇದ್ದಷ್ಟಕ್ಕೆ ಸಮಾಧಾನ,
ಎಲ್ಲಿ ಇಟ್ಟಾನೋ
ನಮ್ಮ ಗುರಿ ನ ಮುಚ್ಚಿ,
ಯಾವಾಗ ನಿಲ್ತೈತೋ
ನಮ್ಮಿ ಆಟದ ಓಟ,
ಬರೆದವನಿಗೆ ಗೊತ್ತು ಜೀವನದ
ಪೂರ್ತಿ ಪುಟದ ಸಾರಾಂಶ,
ಅದುನ ಹುಡುಕಾ ಕಂತ್ಲೇ ಬಿಟ್ಟವ್ನೆ
ಬಾಳಿನ ಚದುರಂಗದಾಟದಾಗ,
ತುಗಾಡ ಕತ್ತೀವಿ ಜೀವನದ ಜೋಕಾಲ್ಯಾಗ,
ಅತ್ಲಿಂದಿತ್ತ ಇತ್ಲಿಂದತ್ತ,
ಸಾಗಲೇಬೇಕು ಜೀವನ
ಬರದವನಾಣತಿಗೆ ಶಿರಭಾಗಿ,!
ನಾಗರತ್ನ ಕೊಟ್ರೇಶ್ ಶಿಕ್ಷಕಿ
ಎಸ್ ಕೆ ಓ ಎಸ್ ಟಿ ಮೆಮೋರಿಯಲ್ ಸ್ಕೂಲ್ ಸೊಕ್ಕೆ
About The Author
Discover more from JANADHWANI NEWS
Subscribe to get the latest posts sent to your email.