
ಚಳ್ಳಕೆರೆ ಏ.10
ಭಗವಾನ್ ಮಹಾವೀರರು ರಾಜ
ಭೋಗಗಳನ್ನು ತ್ಯಜಿಸಿ ಅಹಿಂಸಾ ಮಾರ್ಗದ ಮೂಲಕ
ಜೀವನ ಸಾಕ್ಷಾತ್ಕಾರಗೊಳಿಸಿದವರು. ಅಂತೆಯೇ ನಾವು
ಅಹಿಂಸಾ ಮಾರ್ಗದಲ್ಲಿ ನಡೆದಾಗ ಜೀವನ
ಸಾರ್ಥಕ್ಯಗೊಳಿಸಬಹುದು ಎಂದು ಶಾಸಕ ಟಿ.ರಘುಮೂರ್ತಿ ಅಭಿಪ್ರಾಯಪಟ್ಟರು. ನಗರದ ಜೈನ ಸಮುದಾಯ ಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಹಾಗೂ ಜೈನ ಸಮುದಾಯದವತಿಯಿಂದ ಆಯೋಜಿಸಿದ್ದ
ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಪುಷ್ಪಾರ್ಚನೆ ಸಲ್ಲಿಸಿ
ಮಾತನಾಡಿದರು, ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಮಂಜುಳಾ ಆರ್ ಪ್ರಸನ್ನಕುಮಾರ್, ಉಪಾಧ್ಯಕ್ಷೆ ಸುಮಾ ಭರಮಯ್ಯ, ತಹಸೀಲ್ದಾರ್ ರೇಹಾನ್ ಪಾಷಾ.ನಗರಸಭೆ ಸದಸ್ಯರು ತಾಲ್ಲೂಕು ಪಂಚಾಯತ್ ಕೆಡಿಪಿ ನಾಮ ನಿರ್ದೇಶನ ಸದಸ್ಯರು.ರಮೇಶ್, ತಾಲ್ಲೂಕು ಗ್ಯಾರೆಂಟಿ ಸಮಿತಿಯ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ, ಜೈನ ಸಮುದಾಯದ ಮುಖಂಡರು ಇತರರಿದ್ದರು .






About The Author
Discover more from JANADHWANI NEWS
Subscribe to get the latest posts sent to your email.