ಹಿರಿಯೂರು:
ತಾಲ್ಲೂಕಿನಲ್ಲಿ ಭದ್ರಾ ನೀರು ಹರಿದು, ಸತತ 3 ನೇ ಬಾರಿಗೆ ವಾಣಿವಿಲಾಸ ಜಲಾಶಯ ಕೋಡಿಬಿದ್ದಿದ್ದು, ತಾಯಿ ಶ್ರೀಕೆಂಚಾಬದೇವಿಯ ಕೃಪೆ ಸದಾ ತಾಲ್ಲೂಕಿನ ಜನತೆಯ ಮೇಲಿದ್ದು, ಜನರ ಸುರಕ್ಷತೆ ಕಾಪಾಡಲಿ ಎಂಬುದಾಗಿ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಪ್ರಾರ್ಥಿಸಿದರು.
ತಾಲ್ಲೂಕಿನ ಸೊಂಡೆಕೆರೆ ಗ್ರಾಮದ ಶ್ರೀಕೆಂಚಾಬದೇವಿ ದೇವಸ್ಥಾನದ ನೂತನ ಕಟ್ಟಡ ಉದ್ಘಾಟನೆ ಹಾಗೂ ಕಳಸ ಪ್ರತಿಷ್ಟಾಪನೆ ಉದ್ಘಾಟಿಸಿ ನಂತರ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಶ್ರೀಕೆಂಚಾಂಬದೇವಿ ಸೇವಾ ಟ್ರಸ್ ಅಧ್ಯಕ್ಷ ಎನ್.ಎ.ಜಯಣ್ಣ, ಗೌರವಾಧ್ಯಕ್ಷರಾದ ಬಿ.ಟಿ.ಅಜ್ಜಪ್ಪ, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಶಶಿಕಲಾ ಸುರೇಶ್ ಬಾಬು, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ನಾಗರತ್ನಮ್ಮ, ಸೊಂಡೇಕೆರೆ ನಾಗರಾಜ್, ಕಂದೀಕೆರೆ ಸುರೇಶ್ ಬಾಬು, ಗ್ರಾಮ ಪಂಚಾಯ್ತಿ ಸದಸ್ಯರುಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


About The Author
Discover more from JANADHWANI NEWS
Subscribe to get the latest posts sent to your email.